ಕಾರ್ಕಳ , ಸೆ. 20 (DaijiworldNews/HR): ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆದ ರಾಜ್ಯ ಮಟ್ಟದ ಕೆ.ಸಿ,ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾದ ಅಭಯ್ಕಾಮತ್ ರಾಜ್ಯ ಮಟ್ಟದಲ್ಲಿ 17ನೇ ರ್ಯಾಂಕ್ ಗಳಿಸಿದ್ದಾರೆ.
ಸುಕ್ಷಿತ್ಪಿ,ಎಚ್ರವರು ಯೋಗ ಮತ್ತು ನ್ಯಾಚುರೋಪತಿ ಹಾಗೂ ಪಶುವೈದ್ಯಕೀಯದಲ್ಲಿ 43ನೇ ರ್ಯಾಂಕ್ ಗಳಿಸಿದ್ದು, ದರ್ಶನ್.ಬಿ ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 64 ನೇ ರ್ಯಾಂಕ್, ಸುಪ್ರೀತ್ಗೌಡ ಬಿಎಸ್ಸಿ ಅಗ್ರಿಯಲ್ಲಿ 69ನೇ ರ್ಯಾಂಕ್ ಗಳಿಸಿದ್ದಾರೆ.
ಸಂಸ್ಥೆಯ ಒಟ್ಟು11 ವಿದ್ಯಾರ್ಥಿಗಳು 500ರ ಒಳಗಿನ ರ್ಯಾಂಕ್ ಹಾಗೂ 26 ವಿದ್ಯಾರ್ಥಿಗಳು ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನುದ್ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಭಿನಂದಿಸಿದ್ದಾರೆ.