ಮಂಗಳೂರು, ಸೆ.20 (DaijiworldNews/PY): ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದಾರೆ. ಎಕ್ಸ್ಫರ್ಟ್ ಕಾಲೇಜಿಗೆ 6 ರ್ಯಾಂಕ್ ಒಲಿದುಬಂದಿದೆ.
ಸಂಜನಾ ಕಾಮತ್, ತೇಜಸ್,ರೀತಮ್
ಬಿಎಸ್ಸಿ ಕೃಷಿ ವಿಭಾಗದಲ್ಲಿ ರೀತಮ್ ಬಿ 2ನೇ ರ್ಯಾಂಕ್, ತೇಜಸ್ 4ನೇ ರ್ಯಾಂಕ್, ಸಂಜನಾ ಕಾಮತ್ ಪಂಚಮಹಾ 7ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ವೆಟರ್ನರಿ ವಿಭಾಗದಲ್ಲಿ ರೀತಮ್ ಬಿ 3ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಬಿ ಫಾರ್ಮಾ/ ಡಿ ಫಾರ್ಮಾ, ಬಿಎನ್ಐಸ್ನಲ್ಲೂ ಕೂಡಾ ರೀತಮ್ ಬಿ ಅವರು 3ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.