ಮಂಗಳೂರು, ಸೆ 20 (DaijiworldNews/MS): ಕೊವೀಡ್ ಕಾರಣದಿಂದ ಸ್ಥಗಿತಗೊಂಡಿದ್ದ 6 ಮತ್ತು 7 ನೇ ತರಗತಿಗಳು ಶಾಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 20 ರ ಸೋಮವಾರದಂದು ಪುನರಾರಂಭಗೊಂಡಿದೆ. ಈ ಹಿಂದೆ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಸೆಪ್ಟೆಂಬರ್ 17 ರಂದು ಆರಂಭಗೊಂಡಿತ್ತು.
ಶಾಲಾರಂಭಕ್ಕಾಗಿ ತರಗತಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ ಸಿದ್ದಪಡಿಸಲಾಗಿದೆ. ಶಾಲೆಗಳಿಗೆ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಇದಲ್ಲದೆ ಪೋಷಕರ ಒಪ್ಪಿಗೆ ಪಡೆಯುವುದು ಮತ್ತು ಆನ್ಲೈನ್ ತರಗತಿಗಳನ್ನು ಏಕಕಾಲದಲ್ಲಿ ನಡೆಸಲು ಸಹ ಸೂಚಿಸಲಾಗಿದೆ.
ದೀರ್ಘ ಅವಧಿಯ ಬಳಿಕ ಶಾಲೆಗೆ ಮರಳಿದ ವಿದ್ಯಾರ್ಥಿಗಳನ್ನುಉತ್ಸಾಹಿಸಲು ಬೋಧನಾ ಸಿಬ್ಬಂದಿ ಸ್ವಾಗತಿಸಿದರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಖ್ಯೋಪಾಧ್ಯಾಯಿನಿ ಮತ್ತು ಬೋಧಕ ಸಿಬ್ಬಂದಿ ಪನ್ನೀರು ಸಿಂಪಡಿಸಿ ಗುಲಾಬಿ ನೀಡಿ ಸ್ವಾಗತಿಸಿದರು.