ಕಾರ್ಕಳ, ಸೆ.19 (DaijiworldNews/PY): "ಗೋಹತ್ಯೆ ನಿಷೇಧ, ಅತ್ಯಾಚಾರ ವಿರುದ್ಧದ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ಕಾನೂನು ಅನುಷ್ಠಾನಗೊಳ್ಳುತ್ತಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಭಗವದ್ಗೀತೆ ಹಿಡಿದ ಕೈಗಳು ತಲವಾರು ಹಿಡಿಯುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣಕ್ಕೆ ಅಸ್ಪದ ನೀಡದಿರಲಿ. ದುಷ್ಕೃತ್ಯಗಳಿಗೆ ಕಡಿವಾಣ ಹಾಕುವ ಮೂಲಕ ಶಾಂತಿ, ಧರ್ಮ ಮರುಸ್ಥಾಪನೆ" ಎಂದು ಚೈತ್ರಾ ಕುಂದಾಪುರ ಹೇಳಿದರು.
ವಿಶ್ವಹಿಂದೂಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ನಿಟ್ಟೆಯಲ್ಲಿ ಭಾನುವಾರ ನಡೆದ ಗೋಕಳ್ಳತನ ಹಾಗೂ ಮತಾಂತರ ವಿರುದ್ಧದ ಬ್ರಹತ್ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
"ರಾಮ ಮಂದಿರ ನಿರ್ಮಾಣಕ್ಕೆ ಮಾಡುವಾಗ ನಮ್ಮ ದೇವಸ್ಥಾನಗಳು ಉರುಳುವಾಗ ಕಾಪಾಡಲು ಸಾಧ್ಯವಾಗಿಲ್ಲ ಇದು ಹಿಂದೂಗಳಾದ ನಮ್ಮ ದುರ್ದೈವ. ಆದರೆ, ಹಿಂದೂ ಸಂಘಟನೆಗಳಿಂದ ಹಿಂದೂತ್ವದ ಪ್ರತೀಕಗಳಿಗೆ ಧಕ್ಕೆ ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ" ಎಂದರು.
"ರಾಜ್ಯ ಬಜರಂಗದಳ ಸಂಚಾಲಕ ಕೆ.ಆರ್ ಸುನೀಲ್ ಎಚ್ಚರಿಕೆ ನೀಡಿದರು. ಗೋಕಳ್ಳತನ ದಂಧೆಯ ಹಣ ಲವ್ಜಿಹಾದ್, ದೇಶದ್ರೋಹಿ ಕೃತ್ಯಗಳಿಗೆ ಬಳಸುತ್ತಾರೆ. ಮುಂದುವರೆದು ಧಾರ್ಮಿಕತೆಗೆ ಧಕ್ಕೆ ತರುತ್ತಾರೆ. ದುಷ್ಟರಿಗೆ ಉತ್ತರ ನೀಡಲು ಹಿಂದೂ ಸಮಾಜದ ಸಿದ್ಧವಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಷ್ಟೆ ಅಲ್ಲ ಅಗತ್ಯಬಿದ್ದರೆ ಎಂತಹ ಹೋರಾಟಕ್ಕೂ ಸಿದ್ಧ" ಎಂದರು.
ವಿ.ಹಿಂ ಪರಿಷದ್ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್, ಜಿಲ್ಲಾ ಸಂಚಾಲಕ, ಸುರೇಂದ್ರ ಕೋಟೇಶ್ವರ, ಉಪಾಧ್ಯಕ್ಷ ಅಶೋಕ್ ಜೈನ್, ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಉಪಾಧ್ಯಕ್ಷ ಸಾಣೂರು ಜಗದೀಶ್, ವೇದಿಕೆಯಲ್ಲಿ ಉಪಸ್ಥಿತರಿದ್ದು ಗೋಹತ್ಯೆ, ಮತಾತಂತರ ಕೃತ್ಯ ಖಂಡಿಸಿದರು. ಚೇತನ್ ಪೇರಲ್ಕೆ ಪ್ರಸ್ತಾವನೈದಯ ಸ್ವಾಗತಿಸಿದರು. ಪ್ರಣಯ್ ವಂದೆಮಾತರಂ ಹಾಡಿದರು.
ಭಾರತ ಮಾತೆಗೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ನಡೆಯಿತು.