ಕಾರ್ಕಳ, ಸೆ.18 (DaijiworldNews/PY): ನಂದಿಕೂರಿನಿಂದ ಕಾರ್ಕಳ - ಉಜಿರೆ - ಚಾರ್ಮಾಡಿ ಮುಖಾಂತರ ಹಳೇ ಮೂಡಿಗೆರೆಗೆ ರೈಲ್ವೆ ಸಂಪರ್ಕ ಯೋಜನೆ ಸಮೀಕ್ಷೆ ಅಂತಿಮಗೊಂಡಿದ್ದು, ಅಭಿವೃದ್ಧಿ ಕೆಲಸ ಶೀಘ್ರದಲ್ಲಿ ಅನುಷ್ಠಾನಗೊಳಿಸುವ ಮೂಲಕ ಬಹುವರ್ಷದ ಜನತೆ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೆಥೋಲಿಕ್ ಸಭಾ ವತಿಯಿಂದ ಮನವಿ ಸಲ್ಲಿಸಲಾಯಿತು.
ವಲಯ ಅಧ್ಯಕ್ಷ ಸೊಲೊಮನ್ ಆಲ್ವಾರಿಸ್ ಮುಂದಾಳತ್ವದಲ್ಲಿ, ಕಥೊಲಿಕ್ ಸಭಾ ವಲಯ ಕಾರ್ಯಾದರ್ಶಿ ಹಾಗೂ ರೈಲ್ವೇ ಸಂಚಾಲಕ ಮೆಕ್ಸಿ ಡಿ'ಮೆಲ್ಲೊ ಇವರ ನಿರ್ದೇಶನದಲ್ಲಿ, ವಲಯ ಮಾಜಿ ಅಧ್ಯಕ್ಷ ಪ್ರಕಾಶ್ ಡಿ'ಸೋಜ ಅಜೆಕಾರು, ಕಥೊಲಿಕ್ ಸಭಾ ಕಾರ್ಕಳ ಟೌನ್ ಘಟಕ ಅಧ್ಯಕ್ಷ ನೇವಿಲ್ ಡಿ'ಸಿಲ್ವ, ಮ್. ಸಿ. ಸಿ. ಬೆಂಕ್ ಉಪಾಧ್ಯಕ್ಷ ಜೆರಾಲ್ಡ್ ಡಿ'ಸಿಲ್ವ, ಹೆನ್ರಿ ಸಾಂತ್ ಮಯೋರ್ ಉಪಸ್ಥಿತರಿದ್ದರು.