ಉಡುಪಿ, ಸೆ 17 (DaijiworldNews/MS): ಹಿಂದೂಗಳ ದೇವರ ಮೇಲಿನ ನಂಬಿಕೆ ಮೂಢನಂಬಿಕೆ ಅಲ್ಲ, ಸುಳ್ಳು ಹೇಳಿ ದೇವಸ್ಥಾನ ಸ್ಥಾಪಿಸಲು ಸಾಧ್ಯವಿಲ್ಲ, ನಾಗ ಬನ ಕಟ್ಟಲು ಒಂದು ಸಿದ್ಧಾಂತವಿದೆ. ಶಕ್ತಿಪೀಠ ಬೇಕು. ವೈಜ್ಞಾನಿಕ ಹಿನ್ನೆಲೆ ಇದೆ. ನಡುರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿಸಿ ನಮಾಜ್ ಮಾಡುವುದ್ದನ್ನು ಯಾವ ರಾಜಕಾರಣಿಯೂ ಪ್ರಶ್ನಿಸುವುದಿಲ್ಲ . ರಸ್ತೆಗಾಗಿ ನೂರಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದ ದೇಗುಲವನ್ನು ಕೆಡವಿದ್ದು ಹಿಂದೂ ಅಸ್ಮಿತೆಯನ್ನು ವಿರುದ್ಧ ಎದ್ದಿರುವ ಷಡ್ಯಂತ್ರ್ಯ, ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಕೈವಾಡ ಇದೆ. ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಹುನ್ನಾರ ಇದರ ಹಿಂದೆ ಇದೆ ಎಂದು ವಿಶ್ವ ಹಿಂದು ಪರಿಷತ್ ರಾಷ್ಟ್ರೀಯ ವಿಶ್ವಸ್ಥ ಮಂಡಳಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಕುಂದಾಪುರ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.
ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಬಲವಂತದಿಂದ ಕೆಡವಿದ್ದನ್ನು ವಿರೋಧಿಸಿ ಗುರುವಾರ ಉಡುಪಿ ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಮುಂಭಾಗದಲ್ಲಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳವು ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಈ ಹಿಂದೆ ಹಿಂದುಗಳೇ ಬಹುಸಂಖ್ಯಾತವಾಗಿದ್ದ ಪ್ರದೇಶ , ಆದರೆ ಸತ್ಯವನ್ನು ಹೇಳಲಾಗದೆ ಮನಬಿಚ್ಚಿ ಮಾತನಾಡದೇ ಇದ್ದದ್ದಕ್ಕೆ ಇಂದು ಬಾಂಗ್ಲಾ , ಅಫ್ಘಾನ್ ನಿರ್ಮಾಣವಾಗಿದೆ. ದೇಶದಲ್ಲಿ ದೇವಸ್ಥಾನ ವನ್ನು ಒಡೆಯುವ ಧಾವಂತ ನೋಡಿದರೆ ಬಹುಮಾನ ಪಡೆಯುವಂತಿದೆ. ದೇವಸ್ಥಾನ ಒಡೆಯುವುದರಿಂದ ಹಿಂದುಗಳ ಮಾನಸಿಕತೆಯನ್ನು ಪರೀಕ್ಷೆ ಮಾಡುತ್ತಿದೆ. ದೇವಸ್ಥಾನ ಗಳಿಗೆ ೫೦೦೦ ವರ್ಷಗಳ ಹಿಂದಿನ ನಾಗರೀಕತೆಗನುಗುಣವಾಗಿ ನಿರ್ಮಾಣವಾಗಿದೆ. ದೇವಸ್ಥಾನ ಇದ್ದಲ್ಲಿಗೆ ರಸ್ತೆ ಬಂತು, ರಸ್ತೆ ಇದ್ದಲ್ಲಿ ದೇವಸ್ಥಾನ ನಿರ್ಮಾಣ ಆಗಿಲ್ಲ ಎಂದರು.
ದೇವಸ್ಥಾನ ಕೆಡವುದರ ವಿರೋಧ ನಿಲ್ಲುವುದು ಕೇವಲ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ಹೊಣೆ ಎಂದು ಎಲ್ಲರೂ ಭಾವಿಸಿದಂತಿದೆ. ಹೀಗೆ ಮುಂದುವರಿದರೆ ನಮ್ಮ ದೇಶದಲ್ಲೂ ಅಪ್ಘಾನ್ ಗೆ ಬಂದ ಸ್ಥಿತಿ ಇಲ್ಲೂ ಬರಬಹುದು. ಅಲ್ಲಿ ಮುಷ್ಕರ ಮಾಡಲು ಜನವೇ ಇಲ್ಲ. ಮುಸ್ಲಿಂರಿಗೆ ಇಸ್ಲಾಂ ದೇಶದಲ್ಲಿ ನೆಲೆಯಿಲ್ಲ. ಮತಗಳ ಆಧಾರದ ಮೇಲೆ ಜಾಗವನ್ನು ಈಗಾಗಲೇ ಕೊಟ್ಟಿದ್ದರಿಂದ ದೇಶ ವಿಭಜನೆಯಾಗಿದೆ. ಇಷ್ಟೆಲ್ಲಾ ಆದರೂ ಕೂಡ ಭಾರತದಲ್ಲಿ ಅಫ್ಘಾನ್ ಗೆ ಆದ ಸ್ಥಿತಿಯನ್ನು ಇಲ್ಲೂ ನಿರೀಕ್ಷೆ ಮಾಡುತ್ತಿದ್ದೇವೆಯೆ ಎಂದು ಪ್ರೇಮಾನಂದ ಶೆಟ್ಟಿ ಪ್ರಶ್ನಿಸಿದರು.
ಭಜರಂಗದಳ ಜಿಲ್ಲಾ ಸಂಯೋಜಕ ಸುರೇಂದ್ರ ಕೋಟೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಸಂಪರ್ಕ ಪ್ರಮುಖ ಗಿರೀಶ್ ಕುಂದಾಪುರ, ಸುರಕ್ಷಾ ಪ್ರಮುಖ್ ರಾಜೇಶ್ ಕೋಟ್ಯಾನ್, ಭಜರಂಗದಳದ ಅಖಾಡ ಪ್ರಮುಖ್ ಮನೋಜ್ ಮೊದಲಾದವರು ಉಪಸ್ಥಿತರಿದ್ದರು.