ಸುಳ್ಯ, ಸೆ 16(DaijiworldNews/MS): ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿರುವ ಬಗ್ಗೆ ವರದಿಯಾಗಿದೆ. ತಳ್ಳಿ ಹಾಕಿದ ಘಟನೆಯ ನಂತರ, ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಆಕೆಯನ್ನು ಕೆಳಗೆ ತಳ್ಳಿದ ವ್ಯಕ್ತಿ ಇಬ್ಬರೂ ನಾಪತ್ತೆಯಾಗಿದ್ದಾರೆ.
ವರದಿಗಳ ಪ್ರಕಾರ, ಚೆಂಬು ಗ್ರಾಮ ಪಂಚಾಯತ್ ಸದಸ್ಯೆ ದಬ್ಬಡ್ಕ ಕಮಲಾ ಅವರು ಸೆಪ್ಟೆಂಬರ್ 15 ರ ಬುಧವಾರ ಸಂಜೆ ತನ್ನ ಸನಿಹದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೆಲವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಮುತ್ತು ಎಂಬ ನೆರೆಮನೆಯಾತ ಆಕೆಯನ್ನು ಇದ್ದಕ್ಕಿದ್ದಂತೆ ದಬ್ಬಡ್ಕ ಸೇತುವೆಯಿಂದ ಕೆಳಗೆ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ.
ಘಟನೆ ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಕೆಳಕ್ಕೆ ಬಿದ್ದಿರುವ ಗ್ರಾ. ಪಂ. ಸದಸ್ಯೆ ಕಮಲ ಅವರ ಸುಳಿವು ಕೂಡ ದೊರೆತಿಲ್ಲ. ಸೇತುವೆಯಿಂದ ಮುತ್ತು ಕೆಳಕ್ಕೆ ಹೋಗಿ ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿರಬಹುದು ಎಂದು ವದಂತಿ ಹರಿದಾಡುತ್ತಿದೆ.