ಮಂಗಳೂರು, ಸೆ. 15 (DaijiworldNews/SM): ಮೈಸೂರಿನ ನಂಜನಗೂಡಿನಲ್ಲಿ ದೇವಾಲಯ ಕೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಪಕ್ಷದ ಸಂಸ್ಕೃತಿಯೇ ಕೆಡುವುದು. ಇವರು ಕೆಡುವುದರಲ್ಲಿ ನಿಸ್ಸೀಮಾರಾಗಿದ್ದಾರೆ. ಸಮಾಜ ಹಾಗೂ ಜನರ ಭಾವನೆಯನ್ನು ಕೆಡವುತ್ತಿದ್ದಾರೆ. ಇದೀಗಾ ಧಾರ್ಮಿಕ ಕೇಂದ್ರಗಳನ್ನು ಕೆಡುವುದರಲ್ಲಿ ತೊಡಗಿಕೊಂಡಿದ್ದಾರೆ. ಜನರ ಭಾವನೆಗಳನ್ನು ಅರ್ಥ ಮಾಡದೆ ಭಾವನೆಗಳನ್ನು ಕೆಡುವುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದೇಶಿಯರು ದೇವಾಲಯ ಮಸೀದಿ ಕೆಡವಿದ್ದನ್ನು ಇತಿಹಾಸದಲ್ಲಿ ಓದಿದ್ದೆ. ಆದರೆ ಇದೀಗಾ ಬಿಜೆಪಿ ಈ ಕಾರ್ಯದಲ್ಲಿ ತೊಡಗಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೇವಾಲಯ ಮಂದಿರ ಧ್ವಂಸ ಆಗಬಾರದು. ಇಲ್ಲಿ ಬಿಜೆಪಿಗರು ಬಾಲಿಷ ಹೇಳಿಕೆ ನೀಡ್ತಾ ಇದ್ದಾರೆ. ಇವ್ರಿಗೆ ಅಧಿಕಾರಿಗಳು ಮಾಡುವ ಆದೇಶ ಗೊತ್ತಿಲ್ಲ ಅಂತಾರೆ. ಸರ್ಕಾರ, ಕೋರ್ಟ್ ಮತ್ತು ಅಧಿಕಾರಿಗಳ ಮೇಲೆ ಗೂಬೆ ಕೂರಿಸ್ತಿದೆ. ಆದರೆ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.