ಉಡುಪಿ, ಸೆ 15 (DaijiworldNews/MS): ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಆದಿಶಕ್ತಿ ಶ್ರೀ ಮಹದೇವಮ್ಮ ಭೈರವೇಶ್ವರ ಪುರಾತನ ದೇವಸ್ಥಾನವನ್ನು ಬಲವಂತದಿಂದ ಕಾನೂನುಬಾಹಿರವಾಗಿ ಒಡೆದು ಹಾಕಿರುವುದನ್ನು ಬಜರಂಗದಳ ತೀವ್ರುವಾಗಿ ಖಂಡಿಸುತ್ತದೆ. ಇದೊಂದು ಹಿಂದು ಸಮಾಜದ ಮೇಲೆ ಆದಂತಹ ದೊಡ ಆಘಾತ. ಇದಕ್ಕೆ , ಸಂಬಂಧ ಪಟ್ಟಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ನಂಜನಗೂಡು ತಾಲೂಕಿನ ತಹಶೀಲ್ದಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಭಜರಂಗ ದಳದ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್ ಆಗ್ರಹಿಸಿದ್ದಾರೆ.
ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, " ಮೈಸೂರು ಘಟನೆಗೆ ಸಂಬಂಧ ಪಟ್ಟಂತೆ ಮಂಗಳೂರು ವಿಭಾಗದಲ್ಲಿ ನಾಳೆ ಉಡುಪಿ, ಮಂಗಳೂರ್, ಪುತ್ತೂರಿನ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ದೇಗುಲಗಳನ್ನು ಕೆಡವುದರಲ್ಲಿ ಭಾಗವಹಿಸಿದವರಲ್ಲಿ ಹಿಂದೂ ವಿರೋಧಿ ಶಕ್ತಿಯ ಮಾನಸಿಕತೆ ಅಡಗಿದೆ. ಜಿಹಾದ್ ಮಾನಸಿಕತೆಯ ಅಧಿಕಾರಿಗಳು ಇಂದಿಗೂ ಇದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಯಾವುದೇ ದೇವಸ್ಥಾನ ಕೆಡವಬಾರದು ಎಂದು ಆದೇಶ ಹೊರಡಿಸುವದನ್ನು ಬಜರಂಗದಳ ಸ್ವಾಗತಿಸುತ್ತದೆ. ರಾಜ್ಯದಲ್ಲಿ ಯಾವುದೇ ದೇವಸ್ಥಾನ ಮತ್ತು ದೈವಸ್ಥಾನ ಗಳನ್ನು ತೆಗಿಯಬಾರದು ಎಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು.
ಮೈಸೂರಿನಲ್ಲಿ ನಡೆದ ದೇವಸ್ಥಾನವನ್ನು ಧ್ವಂಸ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಕೊಡದೆ ಯಾವುದೇ ನೋಟೀಸ್ ಗಳನ್ನು ಕೊಡದೆ ಪರ್ಯಾಯ ಮಾರ್ಗವನ್ನು ಅನುಸರಿಸದೆ ಹಾಗೂ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ಮಾಡದೆ ಏಕಾಏಕಿ ರಾತ್ರಿ ಹೊತ್ತು ದೇವಸ್ಥಾನವನ್ನು ಧ್ವಂಸಗೊಳಿಸುವುದು ಈ ಪುಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚರ್ಚ್ ಮಸೀದಿಗಳಿದ್ದರೂ ಮೊದಲನೆಯದಾಗಿ ಹಿಂದೂಗಳ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿದೆ. ಇದರ ಹಿಂದೆ ಹಿಂದೂ ವಿರೋಧಿಗಳು ಅಧಿಕಾರಿಗಳ ಜತೆ ಶಾಮೀಲಾಗಿರುವುದು ಸ್ಪಷ್ಟವಾಗಿದೆ ಆದ್ದರಿಂದ ಈ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕು ಈ ಪ್ರಕರಣದಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದರು.
ಸರಕಾರ ಯಾವುದೇ ಇರಲಿ. ಹಿಂದೂ ಶೃದ್ಧಾ ಕೇಂದ್ರಗಳಿಗೆ ಯಾವಾಗ ದಕ್ಕೆ ಆಗುತ್ತೆ ಆಗ ಹಿಂದೂ ಸಂಘಟನೆ ಹೋರಾಟಕ್ಕೆ ನಿಲ್ಲುತ್ತೆ . ಆಧುನಿಕತೆ ಬೇಕೇ ಬೇಕು, ಅದರ ಜೊತೆಗೆ ಶೃದ್ಧೆಯೂ ಇರಬೇಕು, ಭಾರತವು ಧಾರ್ಮಿಕ ವಿಚಾರದಲ್ಲಿ ಪುಣ್ಯ ಭೂಮಿ. ಮುಂದೆ ಇಂತಹದ್ದೇ ವಿಚಾರ ಬಂದಾಗ ಸರಿಯಾದ ವ್ಯವಸ್ಥೆ ಕಲ್ಪಿಸಿ ಪುರಾತನ ದೇಗುಲವನ್ನು ಅಥವಾ ದೈವಸ್ಥಾನವನ್ನು ತೆರವುಗೊಳಿಸಬೇಕು ಎಂದು, ಸುನಿಲ್ ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷದ್, ಜಿಲ್ಲಾ ಅಧ್ಯಕ್ಷರಾದ ವಿಷ್ಣು ಮೂರ್ತಿ ಆಚಾರ್ಯ , ವಿಶ್ವ ಹಿಂದೂ ಪರಿಷದ್ ಜಿಲ್ಲಾ ಉಪಾಧ್ಯಕ್ಷರು ಅಶೋಕ್ ಪಾಲ್ಯ ಮತ್ತು ಬಜರಂಗದಳ ಜಿಲ್ಲಾ ಸಂಚಾಲಕರಾದ ಸುರೇಂದ್ರ ಕೋಟೇಶ್ವರ್ ಉಅಪಸ್ಥಿತರಿದ್ದರು