ಮಂಗಳೂರು ಸೆ 15 (DaijiworldNews/MS): ಕಾಂಗ್ರೆಸ್'ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ಅವರ ಪಾರ್ಥೀವ ಶರೀರಕ್ಕೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ವಿಧಿ ವಿಧಾನ ನಡೆಸಿ ಅಂತಿಮ ಪಾರ್ಥನೆ ಸಲ್ಲಿಸಲಾಯಿತು.
ಈ ವೇಳೆ ತಮ್ಮ ತೀವ್ರ ಅನಾರೋಗ್ಯದ ನಡುವೆಯೂ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ತಮ್ಮ ಒಡನಾಡಿಯಾಗಿದ್ದ ಆಸ್ಕರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದು ನಮನ ಸಲ್ಲಿಸಿದರು. ಈ ವೇಳೆ ಆಸ್ಕರ್ ಪಾರ್ಥೀವ ಶರೀರ ಕಂಡು ಪೂಜಾರಿ ಕಣ್ಣೀರಿಟ್ಟು ಭಾವುಕರಾದರು.
ಇಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 10 ರವರೆಗೆ ಮಿಲಾಗ್ರಿಸ್ ಚರ್ಚ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. 12 ರಿಂದ 1 ರವರೆಗೆ ಆರ್ಚ್ ಬಿಷಪ್ ಅವರ ನೇತೃತ್ವದಲ್ಲಿ ವಲಿಪೂಜೆ ನೆರವೇರಲಿದೆ. ಸಂಜೆ ವಿಮಾನದಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಗುವುದು. ಗುರುವಾರ ಬೆಳಗ್ಗೆ ೧೦ ರಿಂದ ೧೨ರ ತನಕ ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ದರ್ಶನಕ್ಕೆ ಇಡಲಾಗುವುದು. ಬಳಿಕ ಸೈಂಟ್ ಪ್ಯಾಟ್ರಿಕ್ಸ್ ಚರ್ಚ್ ನಲ್ಲಿ ಪಾರ್ಥನೆ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು. ಈ ವೇಳೆ ರಾಹುಲ್ ಗಾಂಧಿ ಬಾಗವಹಿಸುವ ನಿರೀಕ್ಷೆ ಇದೆ.