ಉಡುಪಿ, ಸೆ14 (DaijiworldNews/MS): ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರದಾಗಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಸಂತಾಪ ವ್ಯಕ್ತಪಡಿಸಿ ಮಾತನಾಡಿ, " ಆಸ್ಕರ್ ಫೆರ್ನಾಂಡಿಸ್ ಅಜಾತಶತ್ರು ರಾಜಕಾರಣಿ ಎಂಡರೆ ತಪ್ಪಾಗಲಾರದು, ದೇಶದ ಉದ್ದಗಲಕ್ಕೂ ಆಸ್ಕರ್ ನಂತಹ ಸಜ್ಜನ ರಾಜಕಾರಣಿ ಇಲ್ಲ. ಪಕ್ಷಕ್ಕಾಗಿ ಅವರಲ್ಲಿದ್ದ ಪ್ರಾಮಾಣಿಕತೆ, ನಿಷ್ಠೆ ದೇಶ ಮೆಚ್ಚುವಂತದ್ದು
ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಆಸ್ಕರ್ ಕೇಂದ್ರಕ್ಕೂ ರಾಜ್ಯಕ್ಕೂ ಇದ್ದ ದೊಡ್ಡ ರಾಜಕೀಯ ಕೊಂಡಿಯಾಗಿದ್ದರು ಬೆಂಗಳೂರು ಮೈಸೂರು ದಶಪಥ ರಸ್ತೆಗೆ ಆಸ್ಕರ್ ಕಾರಣ, ಕಾರ್ಮಿಕರ ಮಕ್ಕಳು ಎಂಬಿಬಿಎಸ್ ಓದಲು ಆಸ್ಕರ್ ಕಾರಣರಾದರು. ಇವರ ನಿಧನ ರಾಷ್ಟ್ರ ಕಾಂಗ್ರೆಸ್ ಗೆ ನಷ್ಟ ಆಗಿದೆ. ಅಗಲಿನ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಆಸ್ಕರ್ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವ ರಮಾನಾಥ ರೈ ಸಂತಾಪ ವ್ಯಕ್ತಪಡಿಸಿ, ಕನ್ಯಾಕುಮಾರಿಯಿಂದ ಹಿಮಾಲಯದ ತನಕ ಆಸ್ಕರ್ ಅಭಿಮಾನಿಗಳಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಆಸ್ಕರ್ ಫರ್ನಾಂಡಿಸ್ ಪಾತ್ರ ಮಹತ್ವದ್ದು. ನನಗೆ ಸ್ಪರ್ಧೆ ಮಾಡುವ ಅವಕಾಶ ನೀಡಿದವರು ಆಸ್ಕರ್. ಸುದೀರ್ಘಕಾಲ ಅವರ ಜೊತೆ ರಾಜಕೀಯ ಜೀವನ ನಡೆಸಿದ್ದೇನೆ. ಅವರ ಅಗಲುವಿಕೆ ನಿಜಕ್ಕೂ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು.
ಆಸ್ಕರ್ ಅಹಂಕಾರವಿಲ್ಲದ ತಾಳ್ಮೆಯ ರಾಜಕಾರಣಿಯಾಗಿದ್ದರು.ಆಸ್ಕರ್ ಅವರಿಗೆ ಎಂದೂ ಸಿಟ್ಟು ಬರುತ್ತಿರಲಿಲ್ಲ. ಅವರು ಸಣ್ಣ ಹುದ್ದೆಯಿಂದ ದೇಶದ ಅತಿ ದೊಡ್ಡ ಹುದ್ದೆಗೆ ತಲುಪಿದ ರಾಜಕಾರಣಿಯಾಗಿದ್ದರೂ. ಆಸ್ಕರ್ ರಂತಹ ಸ್ವಭಾವ ಹೊಂದಿದ ಇನ್ನೊಬ್ಬ ರಾಜಕಾರಣಿ ಇಲ್ಲ ಅಪಾಯಿಂಟ್ಮೆಂಟ್ ಇಲ್ಲದೆ ಕಟ್ಟಕಡೆಯ ವ್ಯಕ್ತಿಗೂ ಆಸ್ಕರ್ ಸಿಗುತ್ತಿದ್ದರು. ಅಭಿವೃದ್ಧಿ ಕಾರ್ಯದಲ್ಲಿ ಸದಾ ಜೊತೆಗೆ ನಿಲ್ಲುತ್ತಿದ್ದ ವ್ಯಕ್ತಿಯಾಗಿದ್ದರೂ ಪ್ರಚಾರ ಪಡೆಯದೆ ಸೇವೆಮಾಡಿದ ರಾಜಕಾರಣಿ. ದೇಶದಲ್ಲಿ ಇನ್ನೊಬ್ಬ ಆಸ್ಕರ್ ಹುಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಂಬನಿ ಮಿಡಿದರು.