ಮಂಗಳೂರು, ಸ. 14 (DaijiworldNews/HR): "ಸೆಪ್ಟೆಂಬರ್ 17 ರಂದು 1.5 ಲಕ್ಷ ಲಸಿಕೆಗಳ ಗುರಿಯೊಂದಿಗೆ ಜಿಲ್ಲೆಯಲ್ಲಿ ಮೆಗಾ ವ್ಯಾಕ್ಸಿನೇಷನ್ ಮೇಳ ನಡೆಯಲಿದೆ. ಮೇಳಕ್ಕೆ ಮುಲ್ಕಿಗೆ 10,000, ಮೂಡುಬಿದ್ರಿಗೆ 15,000, ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರಿಗೆ 20,000, ಮತ್ತು ಸುಳ್ಯಕ್ಕೆ 10,000 ಲಸಿಕೆಗಳನ್ನು ವಿತರಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಜಿಲ್ಲೆಯಲ್ಲಿ ಇದುವರೆಗೆ 1.57 ಪಾಸಿಟಿವಿಟಿ ದರವನ್ನು ಹೊಂದಿದ್ದು, ಪ್ರಸ್ತುತ 1,604 ಸಕ್ರಿಯ ಪ್ರಕರಣಗಳು, 500 ಕೊರೊನಾ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಯಲ್ಲಿ ಮತ್ತು 1,104 ಮನೆಯಲ್ಲಿ ಐಸೋಲೇಟ್ ಆಗಿದ್ದು, ಕೊರೊನಾದ ಮರಣ ಪ್ರಮಾಣ 39% ಇವೆ ಎಂದರು.
"ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1 ರಿಂದ ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸಲಾಗಿದ್ದು, ಸೆಪ್ಟೆಂಬರ್ 17 ರಿಂದ ಬೆಳಗ್ಗೆ 9 ಮತ್ತು 10 ನೇ ತರಗತಿಗಳಿಗೆ ತರಗತಿಗಳು ಮತ್ತು 8 ನೇ ತರಗತಿಗೆ ಮಧ್ಯಾಹ್ನದ ತರಗತಿಗಳು ನಡೆಯಲಿವೆ" ಎಂದಿದ್ದಾರೆ.
ಇನ್ನು "ಕೇರಳದಿಂದ ಬಂದು ಮಂಗಳೂರಿನಲ್ಲಿ ಉಳಿದುಕೊಳ್ಳುವವರಿಗೆ ಏಳು ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದು, ಮಂಗಳೂರಿಗೆ ಬರುವವರಿಗೆ 72 ಗಂಟೆಗಳಿಗಿಂತ ಕಡಿಮೆಯಿಲ್ಲದ ಆರ್ಟಿ-ಪಿಸಿಆರ್ ವರದಿ ಕೂಡ ಕಡ್ಡಾಯವಾಗಿದೆ" ಎಂದು ಹೇಳಿದ್ದಾರೆ.