ಮಂಗಳೂರು, ಸ. 14 (DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಧಾರ್ಮಿಕ ಕಟ್ಟಡ ತೆರವಿಗೆ ಲಿಸ್ಟ್ ರೆಡಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಂಗಳೂರಿನ ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನವೂ ಈ ಲಿಸ್ಟ್ನಲ್ಲಿದೆ ಎಂದು ತಿಳಿದು ಬಂದಿದೆ.
2009 ರ ಹಿಂದಿನ ಒಟ್ಟು 902 ಅನಧಿಕೃತ ಕಟ್ಟಡಗಳ ತೆರವಿನ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇದರಲ್ಲಿ ದೇವಸ್ಥಾನಗಳು-667,ಮಸೀದಿಗಳು-186,ಚರ್ಚ್ 56, ಇತರೆ ಧಾರ್ಮಿಕ ಕಟ್ಟಡಗಳು 11 ಇವೆ ಎನ್ನಲಾಗಿದೆ.
ಇನ್ನು ಶಕ್ತಿನಗರದ ಶ್ರೀ ವೈದ್ಯನಾಥ ದೈವಸ್ಥಾನವು ತೆರವಿನ ಲಿಸ್ಟ್ನಲ್ಲಿದ್ದು, ಆಡಳಿತ ಮಂಡಳಿಗೆ ಇನ್ನೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ.