ಮಂಗಳೂರು, ಸ. 14 (DaijiworldNews/HR): ನಗರದ ನಿವಾಸಿಯೊಬ್ಬ ತನ್ನ ಪತ್ನಿ ಮತ್ತು ಮಗನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣದ ಆರೋಪಿಯನ್ನು ರಮೇಶ್ ಬಂಗೇರ ಎಂದು ಗುರುತಿಸಲಾಗಿದೆ.
ಆರೋಪಿಯು ಆತನ ಪತ್ನಿ ಬೇಬಿ ಕುಂದರ್ ಮತ್ತು ಮಗ ಅಶ್ವಿನ್ ಕುಮಾರ್ ಗೆ ಗಾಯ ಮಾಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ರಮೇಶ್ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿ ಕೈಯಲ್ಲಿ ಚಾಕು ಹಿಡಿದು ಮಗನಿಗೆ ಹೊಟ್ಟೆಗೆ ಇರಿಯಲು ಪ್ರಯತ್ನಿಸಿದಾಗ, ಬೇಬಿ ತನ್ನ ಎಡಗೈಯಿಂದ ಚಾಕುವನ್ನು ತಡೆದಾಗ ಗಾಯಗೊಂಡಿದ್ದು, ಅಶ್ವಿನ್ ತನ್ನ ತಂದೆಯನ್ನು ತಡೆಯಲು ಯತ್ನಿಸಿದಾಗ ರಮೇಶ್ ಚಾಕುವಿನಿಂದ ಬಲಗೈಗೆ ಗಾಯಗೊಳಿಸಿದ ಎಂದು ವರದಿಯಾಗಿದೆ.
ಗಾಯಗೊಂಡ ಬೇಬಿ ಸಹಾಯಕ್ಕಾಗಿ ಕೂಗಿದಾಗ, ನೆರೆಹೊರೆಯವರು ಅವರ ಸಹಾಯಕ್ಕೆ ಅಲ್ಲಿಗೆ ಬಂದಿದ್ದಾನೆ.
ಇನ್ನು ರಮೇಶ್ ತನ್ನ ಪತ್ನಿ ಮತ್ತು ಮಗನಿಗೆ ಮನೆಯಿಂದ ಕೂಡಲೇ ಹೊರಹೋಗುವಂತೆ ಹೇಳಿದ್ದು, ಅವರು ಹೊರ ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂಬಂಧಪಟ್ಟವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.