ಕಾಸರಗೋಡು, ಸೆ. 13 (DaijiworldNews/SM): ಎಸ್ ಡಿ ಪಿ ಐ ಕಾರ್ಯಕರ್ತನ ಕೊಲೆಗೆತ್ನಿಸಿದ ಘಟನೆ ಕುಂಬಳೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಆರಿಕ್ಕಾಡಿ ಕಡವತ್ ನ ಸೈನುದ್ದೀನ್(30) ಎನ್ನುವ ಕಾರ್ಯಕರ್ತನ ಕೊಲೆಗೆ ಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಸೈನುದ್ದೀನ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ೭ ಗಂಟೆ ಸುಮಾರಿಗೆ ಕೊಡ್ಯಮ್ಮೆಯಲ್ಲಿ ಕಾರಿನಲ್ಲಿ ಬಂದ ಆರೋಪಿ ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಕುಂಬಳೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಾಗಿ ಶೋಧ ಮುಂದುವರಿಯುತ್ತಿದೆ.