ಉಡುಪಿ, ಸೆ 13 (DaijiworldNews/MS): ಬಿಜೆಪಿಯೂ ಹಿಂದುತ್ವನ್ನ ಗುತ್ತಿಗೆ ತಗೊಂಡಿದ್ದು, ಹೀಗಾಗಿ ದೇವಸ್ಥಾನ ಕೆಡವಿದರೆ ಅದು ದೊಡ್ಡ ವಿಚಾರ ಅಗುವುದಿಲ್ಲ ಭಕ್ತಿ ನಂಬಿಕೆಗೆ ಇರುವ ಕೇಂದ್ರ ವನ್ನು ಏಕಾಏಕಿಯಾಗಿ ಒಡೆಯುವಂತದ್ದು ಎಷ್ಟು ಸರಿ ? ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ವಿನಯಕುಮಾರ್ ಸೊರಕೆ ಬಿಜೆಪಿಯನ್ನು ಟೀಕಿಸಿದರು.
ಅವರು ಸೋಮವಾರ ಮಾಧ್ಯಮಕ್ಕೆ ಮೈಸೂರಿನಲ್ಲಿ ದೇವಾಲಯಗಳ ಬಗ್ಗೆ ಒಡೆಯಲು ಚಿಂತನೆ ನಡೆಸುತ್ತಿರುವ ಬಗ್ಗೆ ವಿಚಾರಕ್ಕೆ ಪ್ರತಿಕ್ರಿಯಿಸಿದರು .
ಮೊನ್ನೆ ಮೊನ್ನೆ ಸಿದ್ದರಾಮಯ್ಯನವರು ಮೂಢನಂಬಿಕೆಯ ಕಾಯಿದೆ ತರಬೇಕು ಎನ್ನುವುದೇ ದೊಡ್ಡ ವಿಚಾರ ಆಗಿತ್ತು , ಯಡಿಯೂರಪ್ಪನವರ ಸರಕಾರ ಬಂದು ಮೂಢನಂಬಿಕೆ ಕಾಯ್ದೆಯ ಒಂದಕ್ಷರ ಬದಲಾವಣೆ ಜಾರಿಗೆ ತಂದರು. ಈಗ ಅವರು ಹೇಳಿದಂತೆ ಏನು ಆಗುತ್ತಿಲ್ಲ. ಬಿಜೆಪಿ ಯಾವುದನ್ನೇ ಮಾಡಿದ್ರು ಆತಂಕ ಇಲ್ಲ. ಹಾಗಾಗಿ ಹಿಂದುತ್ವವನ್ನು ಗುತ್ತಿಗೆ ತೆಗೆದುಕೊಂಡಿದೆ ಎಂದು ವ್ಯಂಗ್ಯವಾಡಿದರು.
ಇನ್ನು ಕಾರ್ಕಳದ ಪ್ರಾರ್ಥನಾ ಮಂದಿರದ ಮೇಲೆ ನಡೆದ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರಕಾರ ಇಲ್ಲ ಕಾನೂನು ಇಲ್ಲ ಎನ್ನುವುದಕ್ಕೆ ಉದಾಹರಣೆ. ಏಕಾಏಕಿ ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು, ಕಾನೂನು ಉಲ್ಲಂಘನೆ ಆಗಿದ್ದರೆ, ಕಾನೂನು ಪ್ರಕಾರ ಕ್ರಮತೆಗೆದು ಕೊಳ್ಳಬಹುದಿತ್ತು . ಇದು ಈಗ ಕಾರ್ಕಳದಿಂದ ಆರಂಭ ಆಗಿದೆ. ಮತಾಂತರ ನಿಜವಾಗಿಯೂ ಇದ್ದರೇ ಅದಕ್ಕೆ ಕಾನೂನು ಇದೆ. ಅವರದ್ದೆ ಸರಕಾರ ಇದೆ. ಕ್ರಮತೆಗೆದುಕೊಳ್ಳಲಿ. ವಾಸ್ತವ ಏನಾಗಿದೆ ಎಂಬುದರ ಬಗ್ಗೆ ವಿಮರ್ಶೆ ಮಾಡಬೇಕು ಅದು ಬಿಟ್ಟು ಮಂದಿರದ ಮೇಲೆ ದಾಂದಲೆ ನಡೆಸಿದ್ದು ಎಷ್ಟು ಸರಿ?? ಎಂದು ವಿನಯ್ ಕುಮಾರ್ ಸೊರಕೆ ಪ್ರಶ್ನಿಸಿದರು.