ಮಂಗಳೂರು, ಸೆ. 12 (DaijiworldNews/SM): ಕೋವಿಡ್ ಹಿನ್ನೆಲೆ ಕಾರ್ಮಿಕರಿಗೆ ಸರ್ಕಾರ ಸುರಕ್ಷಾ ಕಿಟ್ ವಿತರಣೆ ಮಾಡಿದ್ದು, ಕಾರ್ಮಿಕ ಇಲಾಖೆ ನೀಡುವ ಕೋವಿಡ್ ಕಿಟ್ ಅಸಮರ್ಪಕವಾಗಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾರ್ಮಿಕ ವರ್ಗಕ್ಕೆ ನೀಡಿದ ಈ ಕಿಟ್ ಅಸಮರ್ಪಕವಾಗಿದೆ. ಈ ಕಿಟ್ ಕಾರ್ಮಿಕ ವರ್ಗಗಳಿಗೆ ನೀಡಬೇಕೇ ಎಂದು ನಮಗೆ ಅನಿಸುವಂತಾಗಿದೆ. ಇಲ್ಲಿ ನೀಡುವ ಕಿಟ್ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ. ಒಂದು ಕಿಟ್ ಗೆ ಒಂದು ಸಾವಿರಕ್ಕೂ ಅಧಿಕ ರೂಪಾಯಿ ಬೆಲೆ ಹಾಕಿದ್ದಾರೆ. ಆದರೆ, ಅದರಲ್ಲಿ ಅಷ್ಟು ಮೌಲ್ಯದ ಸೊತ್ತುಗಳಿಲ್ಲ. ಈ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕಿಟ್ ಜನರಿಗೆ ನೀಡಲು ಬೇಸರ ಆಗುವಂತಾಗಿದೆ. ಸರ್ಕಾರ ಕಾರ್ಮಿಕ ವರ್ಗಗಳಿಗೆ ನೀಡುವ ಆಹಾರ ಕಿಟ್ ಬೆಲೆ ಸಾವಿರ ನೀಡಿದೆ. ಆದ್ರೆ ಇದ್ರ ಕನಿಷ್ಠ ಬೆಲೆ ೫೦೦ ರಷ್ಟು ಕೂಡ ಆಗಿರಲು ಸಾಧ್ಯವಿಲ್ಲ. ನೀಡಿದ ಅಕ್ಕಿ ಹುಳುಗಳಿಂದ ತುಂಬಿದೆ. ಸರ್ಕಾರ ಮತ್ತು ಜನ್ರ ತೆರಿಗೆ ಹಣ ಈ ರೀತಿ ಪೋಲಾಗುತ್ತಿದ್ದು, ಇದನ್ನು ಮಾಡಲು ನಾವು ಬಿಡಲ್ಲ. ಈ ರೀತಿಯ ಘಟನೆಗಳನ್ನು ಕಾಂಗ್ರೆಸ್ ಖಡಿಸುತ್ತದೆ. ಸರಕಾರ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮಂಗಳೂರಿನಲ್ಲಿ ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದ್ದಾರೆ.