ಮಂಗಳೂರು, ಸ.12 (DaijiworldNews/HR): ನಿಶ್ಚಿತಾರ್ಥವಾಗಿದ್ದ ಯುವತಿ ನಗರದ ಬಲ್ಲಾಳ್ಬಾಗ್ನಿಂದ ನಾಪತ್ತೆಯಾಗಿ ಇತ್ತೀಚೆಗೆ ಬೇರೆ ಸಮುದಾಯದ ಯುವಕನನ್ನು ಮದುವೆಯಾಗಿದ್ದು, ಆಕೆಯು ಪತಿಯೊಂದಿಗೆ ಪೊಲೀಸರ ವಶದಲ್ಲಿದ್ದಾಳೆ.
ಹೊಸದಾಗಿ ಮದುವೆಯಾದ ರೇಷ್ಮಾ ಮತ್ತು ಆಕೆಯ ಪತಿ ಅಕ್ರಂ ಕಳ್ಳತನದ ಆರೋಪದ ಮೇಲೆ ಬರ್ಕೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಹಜರತ್ ಅಲಿಯಾಸ್ ಯಶೋಧಾಳ ಮಗಳು ರೇಷ್ಮಾ ಗದಗಿನ ಯಶೋಧಾಳ ಅಕ್ಕನ ಮಗ ಅಕ್ರಂನನ್ನು ಮದುವೆಯಾಗಿ ಮಂಗಳೂರಿಗೆ ಬಂದಿದ್ದಾಳೆ.
ತನ್ನ ಪೋಷಕರಿಗೆ ತಿಳಿಯದಂತೆ ರೇಷ್ಮಾಳ ತಲೆ ಕೆಡಿಸಿ ಯಶೋಧಾ ಕುಟುಂಬ ಸದಸ್ಯರು, ರೇಷ್ಮಾ ಜೊತೆಗಿದ್ದ ಚಿನ್ನವನ್ನು ತರುವಂತೆ ಕೇಳಿದ್ದರು. ರೇಷ್ಮಾ ಚಿನ್ನದ ಆಭರಣಗಳೊಂದಿಗೆ ಹೋಗುತ್ತಿದ್ದಂತೆ, ಆಕೆಯ ಪೋಷಕರು ಬರ್ಕೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಿದ್ದಾರೆ.