ಮಂಗಳೂರು, ಸ.12 (DaijiworldNews/HR): ಕಾರಿನಲ್ಲಿ ಬಂದ ಪುರುಷರ ಗ್ಯಾಂಗ್ ಮಹಿಳೊಬ್ಬರ ಬ್ಯಾಗ್ ಅನ್ನು ಕಸಿದುಕೊಳ್ಳಲು ಯತ್ನಿಸಿದ ಘಟನೆ ಯೋಜಿತ ಅಣಕು ಪ್ರದರ್ಶನ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಇಂತಹ ಕಳ್ಳತನದ ಸನ್ನಿವೇಶಗಳಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲು ಪೊಲೀಸ್ ಆಯುಕ್ತರು ಅಣಕು ಪ್ರದರ್ಶನ ಕೈಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಎನ್. ಶಶಿಕುಮಾರ್, ಇಂದು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಿಡ್ಜ್ ಕಾರಿನಲ್ಲಿ ಬಂದ ತಂಡವೊಂದು ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಮುಂಭಾಗ ಬಳಿ ಮಹಿಳೆಯಿಂದ ಬ್ಯಾಗ್ ಅನ್ನು ಕಸಿದುಕೊಳ್ಳಲು ಯತ್ನಿಸಿತು, ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಪ್ರತಿರೋಧ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವರು ಅಲ್ಲಿಂದ ತಪ್ಪಿಸಿಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದು. ಇಂತಹ ಪರಿಸ್ಥಿತಿಗೆ ಸಾರ್ವಜನಿಕರು, ಪೊಲೀಸರು ಮತ್ತು ಸಂತ್ರಸ್ತರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಪೊಲೀಸ್ ಇಲಾಖೆ ಕೈಗೊಂಡ ಅಣಕು ಪ್ರದರ್ಶನ ಇದಾಗಿದ್ದು, ಆ ಮಹಿಳೆ ಶೋಭಲತಾ ಕಟೀಲ್, ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್, ಅಲ್ಲಿ ಅವರು ಆತ್ಮರಕ್ಷಣೆ ಕುರಿತು ತರಬೇತಿ ನೀಡುತ್ತಾರೆ. ಮಹಿಳೆಯು ತನ್ನನ್ನು ತಾನು ಯಾವ ರೀತಿ ರಕ್ಷಿಸಿಕೊಂಡಳು ಎಂಬ ವಿಡಿಯೋವನ್ನು ನಾವು ನೋಡಿದ್ದೇವೆ. ಸಾರ್ವಜನಿಕರು ಕೂಡ ರಕ್ಷಣೆಗೆ ಬಂದಿದ್ದಾರೆ. ಕಾರನ್ನು ಅಡ್ಡಗಟ್ಟಿ ಕೆಲವು ಯುವಕರು ಕೂಡ ಕಾರನ್ನು ಬೆನ್ನಟ್ಟಲು ಪ್ರಯತ್ನಿಸಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. 4 ನಿಮಿಷಗಳ ಒಳಗೆ ನಮಗೆ 112 ಗೆ ಕರೆ ಬಂದಿದ್ದು, ಬೆಳಿಗ್ಗೆ 11:10 ರ ವೇಳೆಗೆ, 112 ವಾಹನವು ಸ್ಥಳಕ್ಕೆ ತಲುಪಿ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿತು. ಪೊಲೀಸ್ ಇಲಾಖೆಗೂ ಕೂಡ ಈ ಅಣಕು ಪ್ರದರ್ಶನದ ಕುರಿತು ಮಾಹಿತಿ ಇರಲಿಲ್ಲ.
ಈ ಅಣಕು ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಮಹಿಳಾ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಯುವತಿಯರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಜಾಗರೂಕರಾಗಿರಬೇಕು" ಎಂದು ಹೇಳಿದ್ದಾರೆ.
ಹಿಂದಿನ ವರದಿ:
ಮಂಗಳೂರು: ಮಹಿಳೆಯನ್ನು ಎಳೆದೊಯ್ದು ದರೋಡೆಗೆ ವಿಫಲ ಯತ್ನ - ದೃಶ್ಯ ಸೆರೆ
ಮಂಗಳೂರು, ಸ.12 (DaijiworldNews/HR): ಭಾನುವಾರ ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ರಿಡ್ಜ್ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅಪ್ಪರ್ ಬೆಂದೂರ್ವೇಲ್ ನಲ್ಲಿರುವ ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ.
ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಪ್ರತಿರೋಧ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವರುಗಳು ಅಲ್ಲಿಂದ ತಪ್ಪಿಸಿಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದು, ಈ ಘಟನೆಯ ದೃಶ್ಯ ಸೆರೆಯಾಗಿದೆ.
ಇನ್ನು ಆರೋಪಿಗಳ ಪತ್ತೆ ಪ್ರಯತ್ನ ನಡೆದಿದ್ದು ಸದರಿ ಮಹಿಳೆಯ ಪತ್ತೆ ಕೂಡ ಆಗಿಲ್ಲ ಎನ್ನಲಾಗಿದೆ.
ಮಹಿಳೆಯ ಆಕೆಯ ಪತ್ತೆಯ ಪ್ರಯತ್ನ ಮಾಡಲಾಗುತ್ತಿದೆ. ಆಕೆಯ ಪತ್ತೆ ಆಗದಿದ್ದಲ್ಲಿ ಸುಮೊಟೊ ಪ್ರಕರಣ ದಾಖಲು ಮಾಡಲಾಗುವುದು.