ಗಂಗೊಳ್ಳಿ, ಸ.11 (DaijiworldNews/HR): ನಾಡದ ಗ್ರಾಮದಲ್ಲಿ ಹೊಳೆಗೆ ಕಾಲು ಜಾರಿ ಬಿದ್ದು ತಾಯಿ ಮಗ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ನಾಡ ಚುಂಗಿಗುಡ್ಡೆಯ ನಿವಾಸಿ ಪತ್ರಕರ್ತ ನೋಯಲ್ ಚುಂಗಿಗುಡ್ಡೆ ಅವರ ಪತ್ನಿ ರೋಜಿ ರಿಯಾ ಪಿರೇರಾ (36) ಹಾಗೂ ಪುತ್ರ ಶಾನ್ (11) ಪೂರ್ವಾಹ್ನ 11.30ರ ಸುಮಾರಿಗೆ ನದಿ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ಶ್ಯಾನ್ ಕಾಲು ಜಾರಿ ನದಿಗೆ ಬಿದ್ದಿದ್ದು, ಮಗನ ರಕ್ಷಣೆಗೆ ಮುಂದಾದ ರೀಯಾ ಕೂಡಾ ನೀರಿನ ಸಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದಾರೆ.
ಹುಡುಕಾಟ ನಡೆಸಿದಾಗ ಮೊದಲು ಬಾಲಕ ಶಾನ್ ಮೃತದೇಹ ಪತ್ತೆಯಾಯಿತು. ಬಳಿಕ ಕೆಲವೊತ್ತು ಹುಡುಕಾಟ ನಡೆಸಿದಾಗ ರಿಯಾ ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಗಂಗೊಳ್ಳಿ ಪೋಲಿಸ್ ಠಾಣೆಯ ಅಧಿಕಾರಿಗಳು, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದರು.