ಕಾಸರಗೋಡು, ಸೆ. 10 (DaijiworldNews/SM): ಗೃಹಿಣಿ ಯೋರ್ವಳು ಮನೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಕಲ್ಯೋಟ್ ನಲ್ಲಿ ನಡೆದಿದೆ. ಕಲ್ಯೋಟ್ ತೆಕ್ಕೇಕರೆಯ ಮಹೇಶ್ ರವರ ಪತ್ನಿ ಅನು ಆಂಟನಿ(22) ಮೃತ ಪಟ್ಟವರು.
ಶುಕ್ರವಾರ ಬೆಳಿಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕೊಟ್ಟಾಯಂ ನಿವಾಸಿಯಾಗಿದ್ದ ಅನು ಮಹೇಶ್ ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ಅನು ಮನೆಯವರೊಂದಿಗೆ ಬಾಂಧವ್ಯ ಉತ್ತಮವಾಗಿರಲಿಲ್ಲ. ವಿವಾಹದ ಬಳಿಕ ಅನು ಮತ್ತು ಮಹೇಶ್ ನಡುವೆ ವಿರಸ ಉಂಟಾಗಿತ್ತು ಎನ್ನಲಾಗಿದೆ.
ಮಹೇಶ್ ಆಗಾಗ ಅನುವಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸದ್ಯ ಮಹೇಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೊಟ್ಟಾಯಂನಲ್ಲಿರುವ ಅನುರವರ ಮನೆಯವರನ್ನು ಸಂಪರ್ಕಿಸಲು ಪೊಲೀಸರು ತೀರ್ಮಾನಿಸಿದ್ದಾರೆ.