ಕಾರ್ಕಳ, ಸ.10 (DaijiworldNews/HR): ಉಡುಪಿಯಲ್ಲಿ ನಡೆದ ಅಂತ್ಯೋದಯ ವಿವಿಧ ಯೋಜನೆಗಳ ರಾಜ್ಯ ಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ ಮಲೆಕುಡಿಯ ಜನಾಂಗದ ಅಭಿವೃದ್ಧಿಗಾಗಿ 3 ಕೋಟಿ ರೂ.ಪ್ರತ್ಯೇಕ ಅನುದಾನ ಮೀಸಲಿಡುವಂತೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು,ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಬೆಳ್ತಂಗಡಿ ತಾ|ಭೂ ನ್ಯಾಯ ಮಂಡಳಿ ಸದಸ್ಯರಾದ ಹರೀಶ್ ಎಳೆನೀರು,ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲಗೌಡ ಎತ್ತಲ್ ಗುಡ್ಡೆ,ಕಾರ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್ ಕೆರ್ವಾಶೆ,ಡೀಕಯ್ಯ ಕನ್ಯಾಲು, ಸತೀಶ್ ಕನ್ಯಾಲು,ಸುಂದರ್ ರೆಂಜಾಳ,ನಾರ್ಣ ಪೇರಡ್ಕ, ಪ್ರದೀಪ್ ಕನ್ಯಾಲು,ಉದಯ ಪೇರಡ್ಕ,ಪ್ರಶಾಂತ್ ಪೇರಡ್ಕ ಉಪಸ್ಥಿತರಿದ್ದರು.