ಬಂಟ್ವಾಳ, ಸ.10 (DaijiworldNews/HR): 130 ಕೋಟಿ ವೆಚ್ಚದಲ್ಲಿ ಬಂಟ್ವಾಳ ಜಕ್ರಿಬೆಟ್ಟುವಿನಿಂದ ನರಿಕೊಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಕುಡಿಯುವ ನೀರಿನ ಉದ್ದೇಶದಿಂದ ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಯೋಜನೆ ನರಿಕೊಂಬು ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಒಟ್ಟು 10 ಬೂತ್ ಗಳ ಅಧ್ಯಕ್ಷರುಗಳ ಮನೆಗೆ ಭೇಟಿ ನೀಡಿ ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ತಂತ್ರಜ್ಞಾನ, ರಕ್ಷಣೆ ಮತ್ತು ದೇಶದ ಭದ್ರತಾ ವಿಚಾರದಲ್ಲಿ ಜಗತ್ತು ಭಾರತದತ್ತ ನೋಡುವ ಹಾಗೂ ಕೊರೊನಾ ಸಂಕಷ್ಟದ ದಿನಗಳಲ್ಲಿ ಜೀವನ ಮಾಡಲು ಬೇಕಾದ ಸಕಲ ವ್ಯವಸ್ಥೆ ಮಾಡಿ ಯಶಸ್ವಿಯಾದ ಜಗತ್ತಿನ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು ಎಂಬುದು ಭಾರತೀಯರ ಹೆಮ್ಮೆ" ಎಂದರು.
ಆರ್ಥಿಕ ಪರಿಸ್ಥಿತಿಯನ್ನು ಸ್ಥಿರವಾದ ಸ್ಥಿತಿಯಲ್ಲಿರಿಸಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ ಪ್ರಧಾನಿ ಮೋದಿ ಅವರು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ವ್ಯಕ್ತಿಯಾಗಿದ್ದಾರೆ. ಕಾಶ್ಮೀರದ ಪ್ರತಿ ಗ್ರಾ.ಪಂ.ನಲ್ಲಿ ಧೈರ್ಯ ದಿಂದ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಸಲು ಪ್ರಧಾನಿ ಮೋದಿಯವರ ಸಾಮರ್ಥ್ಯದ ಆಡಳಿತ ವ್ಯವಸ್ಥೆ ಎಂದು ನಾವು ಸಂತೋಷ ಪಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅದ್ಯಕ್ಷೆ ವಿನಿತಪುರುಷೋತ್ತಮ, ಉಪಾಧ್ಯಕ್ಷ ಪ್ರಕಾಶ್ ಮಡಿಮೊಗೆರು, ಸದಸ್ಯ ರಾದ ಕಿಶೋರ್ ಶೆಟ್ಟಿ, ಅರುಣ್ ಕುಲಾಲ್, ಪುರುಷೋತ್ತಮ ಟೈಲರ್, ಚೇತನ್ ಏಳಬೆ,ರಂಜಿತ್ ಕೆದ್ದೇಲು, ಉಷಾಲಾಕ್ಷಿ,ಮಮತ ಸುದೀರ್ ,ರವಿ ಅಂಚನ್, ನಾರಾಯಣ ಪೂಜಾರಿ, ರತ್ನ, ಮೋಹಿನಿವಾಮನ, ಚಿತ್ರಾಕ್ಷಿಸುರೇಶ್, ಉಷಾರಮಾನಾಥ, ಪಾಣೆಮಂಗಳೂರು
ಸತ್ಯದೇವತ ಗುಡಿಯ ಅರ್ಚಕರಾದ ಉಮೇಶ್, ಪ್ರಧಾನವಾಗಿ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ಕಮಲಾಕ್ಷಿ ಕೆ.ಪೂಜಾರಿ ಸುಲೋಚನ ಜಿ.ಕೆ.ಭಟ್, ಪಾಂಡುರಂಗ ಪ್ರಭು, , ರಮನಾಥ ರಾಯಿ, ಯಶೋಧರ ಕರ್ಬೆಟ್ಟು, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಪ್ರೇಮನಾಥ ಶೆಟ್ಟಿ, ಮೋನಪ್ಪ ದೇವಶ್ಯ,ಮಾದವ ಮಾವೆ, ಆನಂದ ಶಂಭೂರು, ದಿನೇಶ್ ಶೆಟ್ಟಿ ದಂಬೆದಾರ್, ಸುರೇಶ್ ಕೊಟ್ಯಾನ್, ರೋಹಿತ್ ಮರ್ದೋಳಿ, ಸುರೇಂದ್ರ ಕೊಪ್ಪಳಕೋಡಿ, ಪುರುಷೋತ್ತಮ ಕೊಪ್ಪಳಕೋಡಿ, ರಾಜೇಶ್ ಬೋಳಂತೂರು, ರಂಜಿತ್ ಮಾಣಿಮಜಲು,ಶ್ರೀಶ ರಾಯಶ, ಉದಯ ಕುಮಾರ್ ಶೆಟ್ಟಿ, ಯಶವಂತ ನಾಯಿಲ,ಜಿನರಾಜ್ ಕೋಟ್ಯಾನ್, ಜಗದೀಶ್ ಬಂಗೇರ ನಿರ್ಮಲ್,ರಾಜ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.