ಮಂಗಳೂರು, ಸ.09 (DaijiworldNews/HR): ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಸಿಯೇಶನ್ (ಎಸ್.ಕೆ.ಪಿ.ಎ) ಮಂಗಳೂರು ವಲಯದ 19ನೇ ವಾರ್ಷಿಕ ಮಹಾಸಭೆಯು ಸ್ಟೆಂಟ್ ಸೆಬಾಸ್ಟಿಯನ್ ಮಿನಿ ಹಾಲ್ ಬೆಂದೂರ್ನಲ್ಲಿ ನಡೆಯಿತು.
ಜಿಲ್ಲಾ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ದೀಪ ಬೆಳಗಿಸುವ ಮೂಲಕ ಮಹಾಸಭೆಗೆ ಚಾಲನೆ ನೀಡಿದರು. ಸಭಾಧ್ಯಕ್ಷತೆಯನ್ನು ವಲಯಧ್ಯಕ್ಷರಾದ ಮಧು ಮಂಗಳೂರು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸಂಚಾಲಕರಾದ ವಿಠ್ಠಲ್ ಚೌಟ, ಗೌರವಾಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಯಾದ ಹರೀಶ್ ಅಡ್ಯಾರ್, ಅಜಯ್ ಕುಮಾರ್, ಎಸ್. ಕೆ. ಪಿ.ಎ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ಕರುಣಾಕರ ಕಾನಂಗಿ ಹಾಗೂ ವಲಯದ ಕಾರ್ಯದರ್ಶಿ ಶ್ರೀಕಾಂತ್ ತಿಲಕ್, ನವೀನ್ ಕೋಡಿಕಲ್, ಕೋಶಾಧಿಕಾರಿ ಮುಕೇಶ್ ಶೆಟ್ಟಿ, ವಲಯದ ಪದಾಧಿಕಾರಿಗಳು ,ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ವಲಯದ ಸದಸ್ಯರಾದ ಸಂತೋಷ್ ಶೆಣೈ ಹಾಗೂ ಫೋಟೋ ಕಿನಾ ಪದ್ಮನಾಭ ಇವರನ್ನು ಸನ್ಮಾನಿಸಲಾಯಿತು.