ಮಂಗಳೂರು,ಸೆ 09 (DaijiworldNews/MS): ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಲ್ಲಾಳ್ಬಾಗ್ನಿಂದ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ನಗದು ಸಹಿತ ನಾಪತ್ತೆಯಾದ ಘಟನೆಯೂ ಲವ್ ಜಿಹಾದ್ ಪ್ರಕರಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ಪ್ರಕರಣವನ್ನು ವಿಹಿಂಪ ಖಂಡಿಸುತ್ತದೆ. ಯುವತಿ ನಾಪತ್ತೆಯಾದ ಮನೆಗೆ ಭೇಟಿ ನೀಡಿ ಹೆತ್ತವರಿಗೆ ದೈರ್ಯ ತುಂಬಿದ್ದೇವೆ. ಆರೋಪಿಯನ್ನ ಕೂಡಲೇ ಬಂಧಿಸಬೇಕು ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಮೂಲತಃ ಗದಗ ನಿವಾಸಿಗಳಾಗಿದ್ದು, ಬರ್ಕೆ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಚ್ಮನ್ ಆಗಿರುವ ಯಶೋಧಾ ಎಂಬವರ ಪುತ್ರಿ ರೇಷ್ಮಾ ( 21) ಅವರ ನಿಶ್ಚಿತಾರ್ಥ ಆ. 21 ರಂದು ನಡೆದಿದ್ದು, ನಿಶ್ಚಿತಾರ್ಥ ಸಂದರ್ಭ ಗಂಡಿನ ಮನೆಯವರು ನೀಡಿದ ಚಿನ್ನಾಭರಣ ಸಮೇತ ನಾಪತ್ತೆಯಾಗಿದ್ದರು.