ಪಡುಬಿದ್ರಿ, ಸ. 08 (DaijiworldNews/HR): ರಾಷ್ಟೀಯ ಹೆದ್ದಾರಿ 66ರ ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಪಕ್ಕದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯಲ್ಲಿದ್ದು 12 ಸಾವಿರ ನಗದು ಮತ್ತು ಎರಡು ಗ್ರಾಂ ಚಿನ್ನದ ಆಭರಣ ಕದ್ದೊಯ್ದ ಘಟನೆ ಸಂಭವಿಸಿದೆ.
ಸಾಂಧರ್ಭಿಕ ಚಿತ್ರ
ಉಚ್ಚಿಲದ ನಿವಾಸಿ ಅಬ್ದುಲ್ ಮಲೀಕ್ನವರ ಬೈತುಲ್ ಅಲ್ ಸಫಾ ಮನೆಗೆ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು, ತಳ ಮಹಡಿ ಮತ್ತು ಮೇಲ್ಮಹಡಿಯ ಎರಡೂ ಮನೆಗಳ ಬೀಗ ಮುರಿದು ಒಳ ನುಗ್ಗಿದ್ದಾರೆ.
ಕಳ್ಳರು ಎರಡೂ ಮನೆಗಳ ಎಲ್ಲಾ ಬೀರುಗಳ ಬಟ್ಟೆಗಳನ್ನು ಹೊರಗೆಡವಿ ಹಣ ಮತ್ತು ಚಿನ್ನಕ್ಕಾಗಿ ಶೋಧನೆ ನಡೆಸಿದ್ದಾರೆ. ಈ ಸಂದರ್ಭ ಅವರಿಗೆ 12 ಸಾವಿರ ರುಪಾಯಿ ನಗದು ಸಿಕ್ಕಿದೆ ಹಾಗೂ ಬೀರುವಿನಲ್ಲಿದ್ದ 2 ಗ್ರಾಂ ಚಿನ್ನದ ಸರ ಕೈ ಸೇರಿದೆ. ಕಳ್ಳರು ಬೀರುವಿನಲ್ಲಿ ಹುಡುಕಾಟ ಮಾಡುವಾಗ, ಅವರ ಕೈ ಸೇರಿದ ಎಲ್ಲಾ ರೋಲ್ಡ್ ಗೋಲ್ಡ್ ಆಭರಣವನ್ನು ಪರಿಶೀಲಿಸಿ, ಅದನ್ನು ಬಿಟ್ಟು ಹೋಗಿದ್ದಾರೆ.
ಮಲೀಕ್ನವರ ಕುಟುಂಬ ಪಕ್ಕದ ಮನೆಯಲ್ಲಿ ನಡೆಯುತ್ತಿದ್ದ ಕರ್ಯಕ್ರಮಕ್ಕೆ ತೆರಳಿ ಅಲ್ಲಿಂದ ಒಂದೆರಡು ಗಂಟೆಗಳ ಬಳಿಕ ವಾಪಾಸಾಗಿದ್ದಾರೆ. ಅಷ್ಟರಲ್ಲೆ ಕಳ್ಳರು ಕೈ ಚಳಕವನ್ನು ತೋರಿಸಿದ್ದಾರೆ.
ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಹಾಗೂ ಸಿಬ್ಬಂದಿ ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.