ಕಾಸರಗೋಡು, ಸ. 08 (DaijiworldNews/HR): ನೀರಿನ ಹೊಂಡಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ಘಟನೆ ಬದಿಯಡ್ಕ ಸಮೀಪದ ಮುಂಡೋಡು ಕಲ್ಲಕಟ್ಟದಲ್ಲಿ ಬುಧವಾರ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟ ಮಗುವನ್ನು ಕಲ್ಲಕಟ್ಟದ ನಾಸರ್ರವರ ಪುತ್ರ ಶಿಹಾಜ್(6) ಎಂದು ಗುರಿತಿಸಲಾಗಿದೆ.
ಸೈಕಲ್ನಲ್ಲಿ ಹೊರಗಡೆ ತೆರಳಿದ್ದ ಬಾಲಕ ದಾರಿ ಮಧ್ಯೆ ನೀರು ತುಂಬಿದ ಹೊಂಡಕ್ಕೆ ಬಿದ್ದು ದುರಂತ ನಡೆದಿದೆ.
ಕೆಲ ದಿನಗಳಿಂದ ಸುರಿದ ಮಳೆಗೆ ನೀರು ತುಂಬಿಕೊಂಡಿದ್ದ , ದಿನಂಪ್ರತಿ ಆಟವಾಡುವ ಸ್ಥಳವಾಗಿದ್ದರೂ ನೀರು ತುಂಬಿದ್ದ ಹೊಂಡ ಅರಿಯದೆ ಬಾಲಕ ಬಿದ್ದಿದ್ದು, ಬೊಬ್ಬೆ ಕೇಳಿ ಧಾವಿಸಿ ಬಂದ ಪರಿಸರವಾಸಿಗಳು ಮೇಲಕ್ಕೆತ್ತಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು.
ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದ್ದಾರೆ.