ಕಾರ್ಕಳ, ಸೆ 8 (DaijiworldNews/MS): ಜಗತ್ಪ್ರಸಿದ್ದ ಅತ್ತೂರಿನ ಸಂತ ಲೊರೆನ್ಸರ ಬಾಸಿಲಿಕಾದಲ್ಲಿ ಮೇರಿ ಮಾತೆಯ ಹಬ್ಬ ಹಾಗೂ ತೆನೆ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಬಾಸಿಲಿಕಾದ ನಿರ್ದೇಶಕರು ಹಾಗೂ ಧರ್ಮಗುರುಗಳು ಅತೀ ವಂದನೀಯ ಆಲ್ಬನ್ ಡಿಸೋಜಾರವರು ಪೂಜಾವಿಧಿಗಳನ್ನು ನಡೆಸಿದರು. ದೇಶವು ಸಾಂಕ್ರಾಮಿಕ ರೋಗದಿಂದ ಮುಕ್ತಿಗೊಳ್ಳಲಿ ಹಾಗೂ ಶಾಂತಿ, ಸೌಹರ್ದತೆಯು ನೆಲೆಸಲಿ, ಕೃಷಿ ಚಟುವಟಿಕೆಗಳು ಫಲದಾಯಕವಾಗಲಿ ಎಂದು ಪ್ರಾರ್ಥಿಸಲಾಯಿತು. ಕೋವಿಡ್ ನಿಯಾಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ ಹಲವಾರು ಭಕ್ತಾದಿಗಳು ಈ ಹಬ್ಬದಲ್ಲಿ ಪಾಲ್ಗೊಂಡರು.
ವಂ.ಜೀತೆಶ್ ಕ್ಯಾಸ್ತೆಲಿನೋ ಹಾಗೂ ವಂ.ರೋಮನ್ ಮಸ್ಕರೇನಸ್ ಪೂಜಾವಿಧಿಗಳು ನೆರವೇರಿಸಲು ಸಹಕರಿಸಿದರು