ಕಾಸರಗೋಡು, ಸೆ 07 (DaijiworldNews/MS): ಕೆಂಗಲ್ಲು ಕೋರೆಯಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವು ಗೈದ ಕೃತ್ಯಕ್ಕೆ ಸಂಬಂಧ ಪಟ್ಟಂತೆ ನಾಲ್ವರನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೇಳ ದರ್ಬೆ ತ್ತಡ್ಕ ದ ದೇವಪ್ಪ (40), ಬದಿಯಡ್ಕ ಬಾರಡ್ಕ ದ ಕನಕ್ಕಪಾಡಿಯ ಹರಿಶ್ಚಂದ್ರ (24), ವಿದ್ಯಾನಗರದ ಗೋವಿಂದ (32,) ಮತ್ತು ಬದಿಯಡ್ಕ ದ ರವಿ ಕುಮಾರ್ (40) ಬಂಧಿತರು.
ಬೇಳ ದರ್ಬೆತ್ತಡ್ಕ ದ ಕೆಂಗಲ್ಲು ಕೋರೆಯಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳ ನ್ನು ಕಳವುಗೈದಿದ್ದರು. ಶುಕ್ರವಾರ ರಾತ್ರಿ ಕಳವು ನಡೆದಿತ್ತು. ಆಲಂಪಾಡಿಯ ನಿಜಾಮುದ್ದೀನ್ ಮತ್ತು ಫೈ ಝಲ್ ರಹಮಾನ್ ರವರ ದೂರಿನಂತೆ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದಾಗ ಕಳವುಗೈದ ಸಾಮಾಗ್ರಿಗಳನ್ನು ಬದಿಯಡ್ಕದ ಗುಜರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದು ಕಂಡುಬಂತು. ಸಾಮಾಗ್ರಿ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.