ಉಡುಪಿ, ಸೆ. 06 (DaijiworldNews/SM): ಜೆಡಿಎಸ್ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಮಬಲದ ಹೋರಾಟ ಕೊಡಲು ಉಡುಪಿ ಜನತಾ ದಳ ಪಕ್ಷ ಸಿದ್ದವಾಗಿದೆ. ಕುಟುಂಬ ರಾಜಕೀಯದಿಂದ ಯಾವ ಪಕ್ಷವೂ ಹೊರತಾಗಿಲ್ಲ. ನಾವು ನಾಯಕರಾಗಿದ್ದೇವೆ. ನಾನು ಯಾವ ರಾಜಕೀಯ ಕುಟುಂಬದಿಂದ ಬಂದಿಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಹಣ ಬಲವಿದ, ಅದರೆ ನಮಗೆ ಜನಬಲವಿದೆ, ಎಂದು ಜನತಾದಳ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಸುಧಾಕರ್ ಶೆಟ್ಟಿ ಮೈಸೂರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಅವರು ಸೋಮವಾರ ಸ್ವದೇಶಿ ಹೆರಿಟೇಜ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಜಿಲ್ಲೆ ಪುನರಚನೆಯಾಗಿದೆ. ಹೊಸ ಸಮಿತಿ ರಚನೆಯಾಗಿದೆ. ಮುಂದೆ 22 ಲಕ್ಷದಷ್ಟು ಸದಸ್ಯತ್ವ ನೋದಾವಣಿ ಮಾಡಲು ಅಭಿಯಾನ ಆರಂಭಿಸುತ್ತಿದ್ದೇವೆ. ಜೆಡಿಎಸ್ ಆರ್ಥಿಕವಾಗಿ ಪ್ರಬಲವಾಗಿಲ್ಲ. ಭೃಷ್ಟಾಚಾರದ ಕಪ್ಪು ಚುಕ್ಕೆಯಿಲ್ಲ. ಸರಕಾರದಲ್ಲಿ ಬೇರೆ ಬೇರೆ ಯೋಜನೆಗಳಿದ್ದರೂ ಜನರಿಗೆ ಸರಿಯಾದ ರೀತಿಯಲ್ಲಿ ಸಿಗ್ತಿಲ್ಲ. ಜೆಡಿಎಸ್ಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯೇ ನಿರ್ಣಾಯಕ, ಜನತಾ ದಳ ಎಲ್ಲಾ ಕಡೆ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರ ಸ್ತಬ್ಧ ಆಗಿದೆ. ಯುವಕರ ಭವಿಷ್ಯ ಕತ್ತಲಗಿದೆ. ಜನತಾದಳ ಜನಬಲದೊಂದಿಗೆ ಚುನಾವಣಾ ಹೋರಾಟ ಮಾಡಿದರೆ ಗೆಲುವು ಸಾಧಿಸಬಹುದು ಎಂದರು. ಜನತಾದಳದ ಕಾರ್ಯ ಜನತೆಗೆ ತಲುಪುವಲ್ಲಿ ವಿಫಲವಾಗಿದೆ. ರಾಜ್ಯ ಸರಕಾರ ಜನತೆಯ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಎರಡು ರಾಷ್ಟೀಯ ಪಕ್ಷದವರು ಪರಸ್ಪರ ಕಚ್ಚಾಟದಿಂದ ದೇಶದ ಸಂಪನ್ಮೂಲವನ್ನು ಲೂಟಿ ಮಾಡ್ತಿವೆ. ಸಮಾಜದ ಜನರಿಗೆ ಬದಲಾವಣೆ ಬೇಕಾಗಿದೆ. ರಾಜ್ಯಕ್ಕೆ ಮುಖ್ಯಮಂತ್ರಿ ಇಲ್ಲದಿರುವ ಸಂದರ್ಭದಲ್ಲಿ ಸಣ್ಣ ನಿರ್ದಾರ ತೆಗೆದುಕೊಳ್ಳಲೂ ಕೂಡ , ಸಚಿವರ ಆಯ್ಕೆಗೆ, ಖಾತೆ ನೀಡುವಾಗ ಕೂಡ ದೆಹಲಿಯತ್ತ ಮುಖಮಾಡಿ ನಿಂತಿತು.