ಮಂಗಳೂರು, ಸೆ. 06 (DaijiworldNews/SM): ನಗರದಲ್ಲಿ ದುಷ್ಕರ್ಮಿಗಳು ಮತ್ತೊಮ್ಮೆ ಅಮಾನವೀಯತೆ ಮೆರೆದಿದ್ದಾರೆ. ನಾಯಿಯೊಂದನ್ನು ಗೋಣಿ ಚೀಲದಲ್ಲಿ ತುಂಬಿಸಿ ಬೀದಿಯಲ್ಲಿ ಬಿಸಾಕಿ ಅಮಾನವೀಯತೆ ತೋರಿದ್ದಾರೆ.
ಮಂಗಳೂರು ನಗರದ ಹೊರವಲಯದ ಕುಡುಪು ರಸ್ತೆಯಲ್ಲಿ ಘಟನೆ ನಡೆದಿದೆ. ಇನ್ನು ನಾಯಿಯನ್ನು ಗಮನಿಸಿದ ವಾಮಂಜೂರು ನಿವಾಸಿ ಗ್ಲಾಟ್ಸನ್, ನಾಗೇಶ್ ಶೆಣೈ ಅವರು ತಕ್ಷಣ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಅಮಾನವೀಯ ಕೃತ್ಯದ ವಿರುದ್ಧ ನಿಂತ ಇಬ್ಬರು ಯುವಕರು ನಾಯಿಯನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ದುಷ್ಕರ್ಮಿಗಳ ಕೃತ್ಯದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.