ಮಂಗಳೂರು, ಸೆ. 06 (DaijiworldNews/SM): ದ.ಕ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನಿಯಾಮವಳಿ ಪ್ರಕಟಗೊಂಡಿದೆ. ಸರ್ಕಾರದ ಆದೇಶದಲ್ಲಿ ಕೆಲವು ಬದಲಾವಣೆ ಮಾಡಿ ದ.ಕ. ಜಿಲ್ಲಾಡಳಿತ ಮಾರ್ಗಸೂಚಿ ಪ್ರಕಟಿಸಿದೆ. ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ ಕೈಗೊಂಡಿರುವ ಮಾರ್ಪಾಡುಗಳೇನು?
ದ.ಕ ಜಿಲ್ಲೆಯಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ
ದೇವಸ್ಥಾನ, ಸಮುದಾಯ ಭವನ, ಮನೆಗಳಲ್ಲಿ ಸರಳ ಆಚರಣೆಗೆ ಸೂಚನೆ
ಶಾಮಿಯಾನ, ಪೆಂಡಾಲ್ ಹಾಕಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ
ಯಾವುದೇ ಮೈದಾನ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಆಚರಣೆ ಇಲ್ಲ
ದೈಜಿವರ್ಲ್ಡ್ ವಾಹಿನಿಗೆ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿಕೆ