ಮಂಗಳೂರು, ಸೆ 06 (DaijiworldNews/MS): ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗಿವೆ. ಅಂದರೆ ರಾಜ್ಯದಲ್ಲೇ ಅತಿ ಹೆಚ್ಚು ಸಾವು ಮತ್ತು ಮರಣ ಪ್ರಮಾಣ ಪ್ರಕರಣ ವರದಿಯಾಗಿದೆ.
ಪ್ರಾತಿನಿಧಿಕ ಚಿತ್ರ
ರಾಜ್ಯದಲ್ಲೇ ಅತಿ ಹೆಚ್ಚು 130 ಸಾವು ಮತ್ತು ಶೇ. 1.55ರಷ್ಟು ಅತಿ ಹೆಚ್ಚು ಮರಣ ಪ್ರಮಾಣ ಪ್ರಕರಣ ದಾಖಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಾಖಲಾದ 113 ಸಾವಿಗಿಂತಲೂ ಇದು ಹೆಚ್ಚಾಗಿದೆ.
130 ಸಾವಿನ ಸಂಖ್ಯೆಯಲ್ಲಿ 97 ದಕ್ಷಿಣ ಕನ್ನಡ, 33 ಇತರ ಜಿಲ್ಲೆಯವರಾಗಿದ್ದಾರೆ. ಆರೋಗ್ಯ ಇಲಾಖೆಯು, ಮಂಗಳೂರು ನಗರ ಪಾಲಿಕೆ ಅಡಿಯಲ್ಲಿರುವ 60 ವಾರ್ಡ್ಗಳ ಪೈಕಿ 13 ರಲ್ಲಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಅಲ್ಲಿ ಪರೀಕ್ಷಾ ಸಕಾರಾತ್ಮಕತೆ ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ನಗರ ವ್ಯಾಪ್ತಿಯಲ್ಲಿ 600 ಕ್ಕೂ ಹೆಚ್ಚು ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯ ಕೋವಿಡ್ -19 ನೋಡಲ್ ಅಧಿಕಾರಿ ಆಶೋಕ್ ದೈಜಿವಲ್ಡ್ ಜೊತೆಗೆ ಮಾತನಾಡಿ, ಕೇರಳದಲ್ಲಿ ಕೊವೀಡ್ ಪಾಸಿಟಿವಿಟಿ ರೇಟ್ ಹೆಚ್ಚುತ್ತಿರುವುದರಿಂದ ಮತ್ತು ದ.ಕ. ಜಿಲ್ಲೆಯು ಕೇರಳದೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತಿರುವುದರಿಂದ, ಇಲ್ಲಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ನಗರದಲ್ಲಿ ಅನೇಕ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕಾಲೇಜುಗಳಿವೆ ಮತ್ತು 90% ವಿದ್ಯಾರ್ಥಿಗಳು ನೆರೆಯ ರಾಜ್ಯಗಳಿಂದ ಬಂದಿದ್ದಾರೆ. ಕೇರಳ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಹೀಗಾಗಿ ನಾವು ಮಂಗಳೂರು ಮತ್ತು ಬೆಂಗಳೂರನ್ನು ಹೋಲಿಸಲು ಸಾಧ್ಯವಿಲ್ಲ. ಇಲ್ಲಿನ ಸನ್ನಿವೇಶವು ಸಂಪೂರ್ಣವಾಗಿ ವಿಭಿನ್ನವಾಗಿದೆ. ನಮ್ಮ ಜಿಲ್ಲೆಯು ಗಡಿ ಜಿಲ್ಲೆಯಾಗಿರುವುದರಿಂದ, ಇಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ ಎಂದು ಹೇಳಿದ್ದಾರೆ.