ಮೂಲ್ಕಿ, ಸೆ 06 (DaijiworldNews/MS): ಭೂಗತ ಲೋಕದ ಕಲಿ ಯೋಗೀಶ್ ಹೆಸರಿನಲ್ಲಿ ಬೆದರಿಕೆ ಕರೆ ಬಂದಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಇಲ್ಲಿನ ಸ್ಥಳೀಯ ಹಾರ್ಡ್ ವೇರ್ ವ್ಯವಹಾರ ಮಾಡುತ್ತಿರುವ ಉದ್ಯಮಿಯೊಬ್ಬರಿಗೆ ಭೂಗತ ಪಾತಕಿ ಕರೆ ಮಾಡಿ ಬೆದರಿಕೆ ಹಾಕಿರುವುದಾಗಿ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಂಟರ್ ನೆಟ್ ಕಾಲ್ ಮೂಲಕ ಕರೆ ಮಾಡಿರುವ ಕಲಿ ಯೋಗೀಶ್ ಹಣ ಬೇಡಿಕೆಯನ್ನು ಇರಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮೂಲತಃ ಹಳೆಯಂಗಡಿ ನಿವಾಸಿಯಾಗಿರುವ ಕಲಿ ಯೋಗೀಶ್ ಎಂಟು ವರ್ಷಗಳಿಂದ ನಾಪತ್ತೆಯಾಗಿದ್ದು ವಿದೇಶದಲ್ಲಿ ನೆಲೆಸಿರುವ ಬಗ್ಗೆ ಸಂಶಯವಿದೆ.