ಪಡುಬಿದ್ರಿ , ಸ.04 (DaijiworldNews/HR): ರಾ.ಹೆ 66ರ ಉಚ್ಚಿಲ-ಪಣಿಯೂರು ತಿರುವಿನಲ್ಲಿ ಗಾ.ಪಂ ಪರವಾನಿಗೆ ಇಲ್ಲದೆ, ಮೀನು ಸಹಿತ ತರಕಾರಿ ವ್ಯಾಪಾರ ಮಾಡುತ್ತಿದ್ದು, ಶನಿವಾರ ಬೇರೆ ಗ್ರಾಮದ ಮೀನು ಮಾರಾಟಗಾರ ಯುವಕನೋರ್ವ ಮೀನು ಮಾರಾಟ ಮಾಡಲು ಬಂದಿದ್ದ. ಆತ ಕಡಿಮೆ ದರದಲ್ಲಿ ಮೀನು ನೀಡುತ್ತಿದ್ದು, ಸ್ಥಳೀಯವಾಗಿ ಮೀನು ಮಾರಾಟ ಮಾಡುವ ಮಹಿಳೆ ಮತ್ತು ಯುವಕನೋರ್ವ ಮೀನು ಮಾರಾಟಕ್ಕೆ ತಗಾದೆ ಎತ್ತಿದ್ದು, ಸ್ಥಳ ಕಾಲಿ ಮಾಡುವಂತೆ ಬೆದರಿಕೆ ಹಾಕಿದ್ದರು.
ಇದೇ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಪಡುಬಿದ್ರಿ ಠಾಣಾಧಿಕಾರಿ ಘಟನಾ ದಿಲೀಪ್, ಹೆದ್ದಾರಿ ಪಕ್ಕದಲ್ಲಿ ಮೀನು ಮಾರಾಟ ಮಾಡುವ ಮಹಿಳೆ ಮತ್ತು ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ.
ಹೆದ್ದಾರಿ ಪಕ್ಕ ಮೀನು ಮಾರಾಟ ಮಾಡಿದ ತ್ಯಾಜ್ಯ ನೀರನ್ನು ಅಲ್ಲೇ ಬಿಡುವುದರಿಂದ ರೋಗ ಭೀತಿ ಎದುರಾಗಿದೆ. ಈಗಿಂದೀಗಲೇ ಮೀನು ಮಾರಾಟ ಮಾಡಲು ಹಿಂದೆ ಸರಿಯ ಬೇಕೆಂದು ತಾಕೀತು ಮಾಡಿದ್ದಾರೆ.
ಮುಂದೆ ಈ ಸ್ಥಳದಲ್ಲಿ ಮೀನಿನ ನೀರು ಬಿಟ್ಟರೆ, ದಂಡದ ಎಚ್ಚರಿಕೆ ನೀಡಿದರು.