ಕಾಸರಗೋಡು, ಸೆ. 03 (DaijiworldNews/SM): ಬದಿಯಡ್ಕ ಉಪ ನೋಂದಣಾಧಿಕಾರಿ ಕಚೇರಿಗೆ ವಿಜಿಲೆನ್ಸ್ ಮಿಂಚಿನ ದಾಳಿ ನಡೆಸಿದೆ. ಈ ವೇಳೆ ದಾಖಲೆಗಳಿಲ್ಲದ 19,200 ರೂಪಾಯಿ ಪತ್ತೆಯಾಗಿದ್ದು, ಅದನ್ನು ತಂಡ ವಶಪಡಿಸಿಕೊಂಡಿದೆ.
ಲಂಚ ಸ್ವೀಕಾರದ ಆರೋಪದ ಕುರಿತು ವಿಜಿಲೆನ್ಸ್ ಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಕಚೇರಿಯಲ್ಲಿ ಲಂಚ ಹಾಗೂ ಅವ್ಯವಹಾರದ ಬಗ್ಗೆ ವಿಜಿಲೆನ್ಸ್ ಗೆ ಹಲವು ದೂರುಗಳು ಲಭಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ವಿಜಿಲೆನ್ಸ್ ಇನ್ಸ್ ಪೆಕ್ಟರ್ ಸಿಬಿ ಥಾಮಸ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ತನಿಖೆ ಮುನ್ನಡೆಸಲಾಗಿದೆ.