ಕಾರ್ಕಳ, ಸ.03 (DaijiworldNews/HR): ಎಲ್ಐಸಿ ಆಪ್ಇಂಡಿಯಾ ಬಹಳಷ್ಟು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಗೋಲ್ಡನ್ಜುಬಿಲಿ ಫೌಂಡೇಶನ್ ಸುಮಾರು 500ಕ್ಕೂ ಹೆಚ್ಚಿನ ಸಮಾಜಮುಖಿ ಯೋಜನೆಗಳಿಗೆ ನೆರವಾಗಿದೆ. ವಿಜೇತ ವಿಶೇಷ ಶಾಲೆ ನಮ್ಮ ಸೇವಾ ಯೋಜನೆಯ ಆಯ್ಕೆಗೆ ಅರ್ಹ ಸಂಸ್ಥೆಯಾಗಿದ್ದು ಈ ಸಂಸ್ಥೆಗೆ ಶಾಲಾ ವಾಹನ ನೀಡಿರುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆ ಹಾಗೂ ಸಾರ್ಥಕವೆನಿಸಿದೆ ಎಂದು ಎಲ್ ಐ ಸಿ ಸೀನಿಯರ್ ಡಿವಿಜನಲ್ ಮ್ಯಾನೇಜರ್ ಬಿಂದುರೋಬರ್ಟ್ ಹೇಳಿದರು.
ಎಲ್ಐಸಿ ಆಪ್ಇಂಡಿಯಾ-ಗೋಲ್ಡನ್ಜುಬಿಲಿ ಫೌಂಡೇಶನ್ ವತಿಯಿಂದವಿಜೇತ ವಿಶೇಷ ಶಾಲೆಗೆ ೩೮+೨ ಸೀಟರ್ ಸೌಲಭ್ಯದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮವನ್ನು ಸೀನಿಯರ್ ಡಿವಿಜನಲ್ ಮ್ಯಾನೇಜರ್ ಬಿಂದುರೋಬರ್ಟ್ ದೀಪ ಪ್ರಜ್ವಲಿಸಿ, ಶಾಲಾ ವಾಹನ ಕೀ ಹಸ್ತಾಂತರಿಸಿದರು.
ಎಪಿಎಂಸಿ ಅಧ್ಯಕ್ಷರು ಹಾಗೂ ವಿಜೇತ ವಿಶೇಷ ಶಾಲಾ ಅಧ್ಯಕ್ಷ ರತ್ನಾಕರ್ ಅಮೀನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅಥಿತಿಗಳಾಗಿ ಮಾರ್ಕೆಟಿಂಗ್ ಮ್ಯಾನೇಜರ್ ಎನ್.ರಮೇಶ್ ಭಟ್, ಮುಖ್ಯ ಪ್ರಬಂಧಕರು ಮೊಯ್ದಿನ್ ಪಿ.ಕೆ., ಸೇಲ್ಸ್ ಮ್ಯಾನೇಜರ್ ಕೆ.ಸದಾಶಿವ, ಇ.ಡಿ.ಎಂ.ಎಸ್, ಮ್ಯಾನೇಜರ್ ಎ.ಮೋಹನ್ದಾಸ್, ಸೇಲ್ಸ್ ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಯಜ್ಞೇಶ್ ಸಿ.ಎಚ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಶಾಲಾ ಕಾರ್ಯದರ್ಶಿ ಹರೀಶ್ಕೋಟ್ಯಾನ್, ಕೋಶಾಧಿಕಾರಿ ಸಂತೋಷ್ ನಾಯಕ್, ಟ್ರಸ್ಟಿ ಕಿರಣ್ ಶೆಟ್ಟಿ, ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಟ್ಟಿ, ಜನಪ್ರಿಯರೈಸ್ ಮಿಲ್ ಮಾಲಕ ಮಂಜುನಾಥ್ ಪೂಜಾರಿ, ಕ.ರಾ.ವಿಶೇಷ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ಕುಂದರ್, ಶಾಲಾ ಹಿತೈಷಿ ರತ್ನಾಕರ್ ಶೆಟ್ಟಿ ಎಣ್ಣೆಹೊಳೆ ಉಪಸ್ಥಿತರಿದ್ದರು.