ಉಡುಪಿ, ಸೆ 3 (DaijiworldNews/MS): 2021-22 ಸಾಲಿನ ಶಿಕ್ಷಕರ ದಿನಾಚರಣೆಯನ್ನು ಕೋವಿಡ್ ಕಾರಣದಿಂದ ಬಹಳಷ್ಟು ಸೀಮಿತವಾಗಿ ಹೆಚ್ಚು ಆಡಂಬರವಿಲ್ಲದೆ ಆಚರಿಸಲು ಹಾಗೂ ಕಾರ್ಯಕ್ರಮದ ಅತಿಥಿಗಳು ಸೇರಿದಂತೆ ಕೇವಲ 50 ಜನರ ಭಾಗವಹಿಸುವಿಕೆಗೆ ಸೀಮಿತವಾಗುವಂತೆ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.
ಕೋವಿಡ್ ಸಾಂಕ್ರಮಿಕಕ್ಕಿಂತ ಮೊದಲು ಶಿಕ್ಷಕರ ದಿನಾಚರಣೆ ಅಂಬಲ್ಪಾಡಿಯ ಶಾಮಿಲಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ ಸರಕಾರದ ಮಾರ್ಗ ಸೂಚಿಯಂತೇ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜನಪ್ರತಿನಿಧಿಗಳು , ಪ್ರಾಟೊಕಾಲ್ ನಲ್ಲಿರುವಂತ ಅಧಿಕಾರಿಗಳು ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ ಒಟ್ಟು ೧೫ ಮಂದಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದರೆ, ೩೫ ಮಂದಿ ಇಲಾಖೆಯ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿರುವರು
ಈ ಬಾರಿ ಶಿಕ್ಷಣ ದಿನಾಚರಣೆಯು ಸೆ. 5 ಕ್ಕೆ , ಬೆಳಗ್ಗೆ 9.30ಕ್ಕೆ ಸೈಂಟ್ ಸಿಸಿಲಿ ಪ್ರೌಢಶಾಲೆ, ಉಡುಪಿ ಇಲ್ಲಿ 2021-22ನೇ ಸಾಲಿನ ಶಿಕ್ಷಕರ ದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಸುನಿಲ್ ಕುಮಾರ್ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಕರ್ನಾಟ ಸರ್ಕಾರ ಇವರು ಕಾರ್ಯಕ್ರಮ ಉದ್ಘಾಟನೆ ಮಾಡುವರು. ಮಾನ್ಯಶ್ರೀ ರಘುಪತಿ ಭಟ್, ಶಾಸಕರು, ಉಡುಪಿ ವಿಧಾನ ಸಭಾ ಕ್ಷೇತ್ರ ಇವರು ಅಧ್ಯಕ್ಷತೆ ವಹಿಸುವರು, ಎಲ್ಲಾ ಶಾಸಕರು, ಎಲ್ಲಾ ಎಮ್.ಎಲ್.ಸಿಗಳು ಭಾಗವಹಿಸುವರು.
ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ, ಮುಖ್ಯಕಾರ್ಯನಿರ್ವಹಗಾಧಿಕಾರಿ, ಉಡುಪಿ ಜಿಲ್ಲಾ ಪಂಚಾಯತ್, ಪೋಲಿಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಜಿಲ್ಲಾ ಕಾರ್ಯದರ್ಶಿಗಳು, ಉಡುಪಿ ಜಿಲ್ಲೆ ಇವರು ಮುಖ್ಯ ಅತಿಥಿಗಳಿರುವರು. ಈ ಕಾರ್ಯಕ್ರಮದಲ್ಲಿ ಒಟ್ಟು 17 ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಆಯ್ಕೆಯಾದವರು:
1. ಶ್ರೀಮತಿ ಶಾಂತ ಪೈ ಸ. ಸ.ಹಿ.ಪ್ರಾ.ಶಾಲೆ' ಯಡ್ತಾಡಿ, ಬ್ರಹ್ಮಾವರ ವಲಯ.
2. ಶ್ರೀ ಶೇಖರ ಗಾಣಿಗ ಸ.ಶಿ ಸ.ಕಿ.ಪ್ರಾ.ಶಾಲೆ ಕಿಸ್ಮತಿ, ಬೈಂದೂರು ವಲಯ.
3. ಶ್ರೀ ಮಂಜುನಾಥ ಶೆಟ್ಟಿ, ಸ.ಶಿ ಸ.ಕಿ.ಪ್ರಾ.ಶಾಲೆ' ಕುಚೂರು-02, ಕಾರ್ಕಳ ವಲಯ
4. ಶ್ರೀ ಸುರೇಶ್ ಶೆಟ್ಟಿ, ಸ.ಶಿ ಸ.ಕಿ.ಪ್ರಾ.ಶಾಲೆ ಕೊಂಜಾಡಿ, ಕುಂದಾಮರ ವಲಯ.
5. ಶ್ರೀಮತಿ ರೇಷ್ಮಾ ಎಂ ಎನ್ ಸ.ಶಿ ಸ.ಕಿ.ಪ್ರಾ.ಶಾಲೆ' ಕುಟ-82, ಉಡುಪಿ ವಲಯ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಆಯ್ಕೆಯಾದವರು :
1. ಶ್ರೀ ದಿನಕರ ಶೆಟ್ಟಿ, ಮು.ಶಿ, ಸ.ಹಿ.ಪ್ರಾ.ಶಾಲೆ, ಬಡಾನಿಡಿಯೂರು, ಬ್ರಹ್ಮಾವರ ವಲಯ,
2, ಶ್ರೀ ಚಂದ್ರ ನಾರಾಯಣ ಬಿಲ್ಲವ, ಸ.ಶಿ. ಸ.ಹಿ.ಪ್ರಾ.ಶಾಲೆ, ಶಿರೂರು, ಬೈಂದೂರು ವಲಯ,
3. ಶ್ರೀ ನರೇಂದ್ರ ಕಾಮತ್, ದೈ.ಶಿ, ಸ.ಹಿ.ಪ್ರಾ.ಶಾಲೆ ಕಾಬೆಟ್ಟು, ಕಾರ್ಕಳ ವಲಯ.
4. ಶ್ರೀ ಶೈಲಿ ಪ್ರೇಮ ಕುಮಾರಿ, ಮು.ಶಿ. ಯು.ಬಿ.ಸಿ.ಎಮ್ ಹಿ.ಪ್ರಾ.ಶಾಲೆ, ಪಾದೂರು, ಉಡುಪಿ ವಲಯ.
5. ಅ) ಶ್ರೀ ಗಣೇಶ್ ಹೆರಳ ಸ.ಶಿ. ಸ.ಹಿ.ಪ್ರಾ.ಶಾಲೆ ಅಲ್ಲಾಡಿ ಆರ್ಥಿ, ಕಂದಾವರ ವಲಯ
ಆ) ಶ್ರೀ ಶ್ರೀನಿವಾಸ ಮು.ಶಿ, ಸ.ಹಿ.ಪ್ರಾ.ಶಾಲೆ ಶೇಡಿಮನೆ, ಕುಂದಾಪುರ ವಲಯ,
ಪ್ರೌಢ ಶಾಲಾ ವಿಭಾಗದಿಂದ ಆಯ್ಕೆಯಾದವರು:
1. ಶ್ರೀ ಪಿ.ವಿ ಆನಂದ ಸಾಲಿಗ್ರಾಮ, ಎಂ.ಎನ್.ಡಿ.ಎಸ್.ಎಮ್ ಪ್ರೌಢಶಾಲೆ ಮುದ್ರಾಡಿ, ಕಾರ್ಕಳ
2. ಶ್ರೀ ಸಂತೋಷ್ ಕುಮಾರ್ ಶೆಟ್ಟಿ, ಮು.ಶಿ ಸ.ಪ್ರೌ.ಶಾಲೆ ಹೆಸ್ಕತ್ತೂರು, ಕುಂದಾಪುರ.
3. ಶ್ರೀ ಸುಬ್ರಹ್ಮಣ್ಯ ತಂತ್ರಿ ಮು,ಶಿ ಎಸ್.ವಿ ಎಸ್ ಪ್ರೌಢ ಶಾಲೆ ಕಟಪಾಡಿ, ಉಡುಪಿ
4. ಶ್ರೀ ಕೃಷ್ಣಮೂರ್ತಿ.ಪಿ ಸ.ಶಿ ಸ.ಪ.ಪೂ.ಕಾಲೇಜು(ಪ್ರೌ.ಶಾ.ವಿ) ನಾವುಂದ, ಬೈಂದೂರು ವಲಯ.
5. ಅ) ಶ್ರೀ ನರೇಂದ್ರ ಕುಮಾರ್, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟಿ, ಬ್ರಹ್ಮಾವರ ವಲಯ.
ಆ) ಶ್ರೀ ಬಿ.ಬಿ ಪ್ರವೀಣ ದೈ.ಶಿ ಶ್ರೀ ನಿಕೇತನ ಅನುದಾನಿತ ಖಾಸಗಿ ಪ್ರೌ.ಶಾ, ಮಟಪಾಡಿ,
ಬ್ರಹ್ಮಾವರ.