ಕಾಸರಗೋಡು, ಸೆ 3 (DaijiworldNews/MS): ಗೃಹಿಣಿಯೋರ್ವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ಕಾರಡ್ಕದಲ್ಲಿ ನಡೆದಿದ್ದು, ಘಟನೆ ಬಳಿಕ ಪತಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ನಾರಂಪಾಡಿ ಕಲ್ಲಂಕೂಡ್ಲುವಿನ ಅನಿತಾ (45) ಮೃತಪಟ್ಟವರು. ಪತಿ ಕಣ್ಣನ್ ನಂಬೂದಿರಿ ನಾಪತ್ತೆಯಾಗಿದ್ದಾರೆ. ಗುರುವಾರ ಬೆಳಿಗ್ಗೆ ಮನೆ ಬಳಿಯ ಶೆಡ್ ನಲ್ಲಿ ಅನಿತಾ ಳ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ,ಮನೆಯಲ್ಲಿದ್ದ 10 ವರ್ಷದ ಪುತ್ರ ಇದನ್ನು ಗಮನಿಸಿ ಬೊಬ್ಬೆ ಹಾಕಿದ್ದು , ಸ್ಥಳೀಯರು ಬಂದು ನೋಡಿದಾಗ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಮೂಲತಃ ಕೊಟ್ಟಾಯಂ ಪಾಲ ನಿವಾಸಿಯಾಗಿರುವ ಕಣ್ಣನ್ ನಂಬೂದಿರಿ ಕುಟುಂಬ ಒಂದು ವರ್ಷದ ಹಿಂದೆ ಕಾರಡ್ಕ ಕಲ್ಲಂಕೂಡ್ಲು ಎಂಬಲ್ಲಿ ಸ್ಥಳ ಖರೀದಿಸಿ ವಾಸವಾಗಿದ್ದಾರೆ. ಇಲ್ಲಿದ್ದ ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಇದರ ಪಕ್ಕದಲ್ಲೇ ಎರಡು ಕೊನೆಯ ಸಣ್ಣ ಶೆಡ್ ನಿರ್ಮಿಸಿ ಅದರಲ್ಲಿ ವಾಸವಾಗಲಿದ್ದರು.
ಕಣ್ಣನ್ ನಂಬೂದಿರಿ ಮಂತ್ರವಾದಿಯಾಗಿದ್ದು , ಬುಧವಾರದಂದು ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎನ್ನಲಾಗಿದೆ. ಅನಿತಾ ವಯನಾಡು ಮೂಲದವರಾಗಿದ್ದು , ಮನೆಯವರಿಗೆ ಮಾಹಿತಿ ನೀಡಲಾಗಿ ದೆ ಅವರು ತಲಪಿದ ಬಳಿಕವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.