ಕಾರ್ಕಳ, ಸ. 02 (DaijiworldNews/HR): ಉಡುಪಿ ಜಿಲ್ಲಾ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಜಿಲ್ಲಾ ಸಮಿತಿ ಸಭೆಯು ಉಡುಪಿ ಕಡಿಯಾಳಿಯ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಜರುಗಿತು.
ಸಭೆಯಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಮಂಡಲದಲ್ಲಿ ದಿನಾಂಕ ನಿಗದಿ ಪಡಿಸಿ ಸಭೆ ಕರೆಯವುದು. ಮಂಡಲದ ಸಭೆಗೆ ಜಿಲ್ಲಾ ಸಂಚಾಲಕರು,ಸಹಸಂಚಾಲಕರು ಮತ್ತು ಆಯಾಯ ಮಂಡಲದ ಜಿಲ್ಲಾ ಸಮಿತಿಯ ಸದಸ್ಯರನ್ನು ಕರೆಯುವುದು.
ಸಪ್ಪೆಂಬರ್ 26 ಆದಿತ್ಯವಾರದಂದು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸುವ ಕುರಿತು ನಿರ್ಧರಿಸಲಾಯಿತು.
ರಾಜ್ಯ ಬಿಜೆಪಿ ಪಂಚಾಯತ ರಾಜ್ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದು, ಪಂಚಾಯತ್ ಪ್ರಕೋಷ್ಠದ ಕಾರ್ಯ ಚಟುವಟಿಕೆಗಳಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ಸಕ್ರಿಯಗೊಳಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.
ಜಿಲ್ಲಾ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ಸಂಚಾಲಕ ರಾಜೀವ್ ಕುಲಾಲ್, ಸಹ ಸಂಚಾಲಕರಾದ ಶ್ರೀನಿವಾಸ ಶರ್ಮ, ಪಡುಬಿದ್ರಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ, ಉಡುಪಿ ನಗರ ಪ್ರಕೋಷ್ಠದ ಸಂಚಾಲಕ ಪ್ರಭಾಕರ್ ತಿಂಗಳಾಯ, ಜಿಲ್ಲಾ ಸಮಿತಿಯ ಸದಸ್ಯ ವಸಂತ ಕೆಂಚಬೆಟ್ಟು, ಸಾಣೂರು ಉಪಸ್ಥಿತರಿದ್ದರು.