ಕಾರ್ಕಳ, ಸ. 02 (DaijiworldNews/HR): ಯರ್ಲಪ್ಪಾಡಿ ಗೋವಿಂದೂರು ಎಂಬಲ್ಲಿ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬನಿಗೆ ಬೈಕ್ನಲ್ಲಿ ಬಂದ ಆರೋಪಿತನೊಬ್ಬ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಅಕ್ಷತ್ ಹೆಗ್ಡೆ(25) ಪ್ರಕರಣದ ದೂರುದಾರ.
ಹಲ್ಲೆಗೂ ಮೊದಲನೆಯ ದಿನ ಸ್ನೇಹಿತ ಸಂದರ್ಶನ ಎಂಬವರೊಂದಿಗೆ ಗೋವಿಂದೂರು ಮಾವಿನಕಟ್ಟೆ ಎಂಬಲ್ಲಿ ಕುಳಿತು ಮಾತನಾಡುತ್ತಿದ್ದಾಗ ನಿತೀನ್ ಕರ್ಕೇರಾ ಎಂಬಾತ ಕರೆ ಮಾಡಿ ಅಕ್ಷತ್ ಹೆಗ್ಡೆಯ ತಂದೆ,ತಾಯಿಗೆ ಬೈದು, ಜಾತಿಗೆ ಅವಹೇಳನಗೈದಿದ್ದಾನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.