ಮಂಗಳೂರು, ಸೆ. 01 (DaijiworldNews/SM): ಮಾನವೀಯತೆಗೆ ಮತ್ತೊಂದು ಹೆಸರು ಕಟಪಾಡಿಯ ರವಿಯಣ್ಣ. ಮನುಷ್ಯತ್ವ ಜೀವಂತವಾಗಿದೆ ಎಂದರೆ ರವಿಯಣ್ಣನಂತಹ ವ್ಯಕ್ತಿಗಳಿಂದ. ತನ್ನ ಕಷ್ಟಗಳನ್ನು ಬದಿಗಿಟ್ಟು ಇತರರಿಗೆ ನೆರವಾಗುವುದು ಭಗವಂತನ ಸೇವೆ ಮಾಡಿದಂತೆ. ಕಟಪಾಡಿಯ ರವಿಯಣ್ಣ ಕಳೆದ ಕೆಲವು ವರ್ಷಗಳಿಂದ ಇತರರಿಗಾಗಿ ಭಿನ್ನವಾದ ವೇಷಗಳನ್ನು ತೊಟ್ಟು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿ ಒಂದು ಪೈಸೆಯನ್ನೂ ಕೂಡ ತನ್ನಲ್ಲಿರಿಸದೆ ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ನೀಡುತ್ತಿದ್ದಾರೆ. ಈ ನಮ್ಮ ರವಿಯಣ್ಣನ ಮುಖಕ್ಕೆ ಗಾಯವಾಗಿರುವ ಫೋಟೋವೊಂದು ವೈರಲ್ ಆಗುತ್ತಿದ್ದು, ಆ ಬಗ್ಗೆ ಕಟಪಾಡಿಯವರು ದೈಜಿವರ್ಲ್ಡ್ ಗೆ ಸ್ಪಷ್ಟನೆ ನೀಡಿದ್ದಾರೆ.
ಮುಖದಲ್ಲೊಂದಿಷ್ಟು ಗಾಯಗಳಿರುವ ಫೋಟೋ ಗಮನಿಸಿದ ಬಳಿಕ ಅನೇಕ ಮಂದಿ ಮರುಕಪಟ್ಟಿದ್ದಾರೆ. ತುಂಬಾ ಜನರು ಈ ಬಗ್ಗೆ ಮುಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ದರೆ, ರವಿಯಣ್ಣನಂತ ವ್ಯಕ್ತಿಗಳಿರಬೇಕೆಂದು ಹಲವು ಜನ ಹೇಳಿದ್ದು ಆಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲೂ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ರವಿಯಣ್ಣನ ಯೋಗ ಕ್ಷೇಮ ವಿಚಾರಿಸಿ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ತಾನು ಆರೋಗ್ಯವಾಗಿದ್ದು, ಮೂರು ವರ್ಷಗಳ ಹಳೆಯ ಫೋಟೋವೊಂದನ್ನು ಯಾರೋ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೃದಯ ವಂತಿಕೆ ಅಂದರೆ ಇದೇ ನೋಡಿ. ಅದೇ ಫೋಟೋ ಬಳಸಿ ಈ ಬಾರಿ ಜನರ ಸಿಂಪತಿ ಗಳಿಸಬಹುದಿತ್ತು. ತಾನು ನೋವು ಉಂಡು ಇತರರಿಗೆ ಬೆಳಕಾಗುವ ಮೂಲಕ ಪರೋಪಕಾರಿ ಎಣಿಸಿಕೊಂಡಿದ್ದಾರೆ. ಈ ಬಾರಿ 6 ಮಕ್ಕಳಿಗೆ ನೆರವಾಗಲು ರವಿಯಣ್ಣ ವಿಶಿಷ್ಟ ವೇಷ ತೊಟ್ಟಿದ್ದರು. ಆದರೆ, ಕೊರೋನಾ ಸಂಕಷ್ಟದಿಂದಾಗಿ ಅಂದುಕೊಂಡಷ್ಟು ಮೊತ್ತ ಸಂಗ್ರಹವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಹೃದಯಿಗಳಿಂದ ರವಿಯಣ್ಣ ನೆರವು ಯಾಚಿಸಿದ್ದಾರೆ.
6 ವರ್ಷದ ಮಗುವಿಗೆ ಲಿವರ್ ಟ್ರಾನ್ಸರ್ಗೆ ನೆರವಾಗಲು, 2 ವರ್ಷದ ಮಗುವಿಗೆ ಬೋನ್ ಶಸ್ತ್ರ ಚಿಕಿತ್ಸೆಗೆ ಸಹಾಯಹಸ್ತ, ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ೧೦ ವರ್ಷದ ಮಗುವಿನ ಚಿಕಿತ್ಸೆಗೆ, ಅಪಘಾತದಲ್ಲಿ ತಲೆಗೆ ಗಾಯವಾಗಿರುವ ೧೬ ವರ್ಷದ ಬಾಲಕನ ಚಿಕಿತ್ಸೆಗೆ ಸೇರಿದಂತೆ ಒಟ್ಟು ೬ ಮಕ್ಕಳ ಚಿಕಿತ್ಸೆಗೆ ನೆರವಾಗಲು ರವಿಯಣ್ಣ ಆಂಡ್ ಕಟಪಾಡಿ ಟೀಂ ರೆಡಿಯಾಗಿದೆ.