ಮಂಗಳೂರು, ಆ 31 (DaijiworldNews/PY): ಭಾರತದ ಕರಾವಳಿಗೆ ಶ್ರೀಲಂಕಾ ಮೂಲದ ಶಂಕಿತ ಉಗ್ರರು ಒಳನುಗ್ಗಿದ್ದು ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಶ್ರೀಲಂಕಾದಿಂದ 12 ಶಂಕಿತ ಉಗ್ರರು ಎರಡು ಯಾಂತ್ರೀಕೃತ ದೋಣಿಗಳಲ್ಲಿ ಕೇರಳದ ಕರಾವಳಿಗೆ ಬಂದಿರಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಕೇರಳದ ಅಲಪ್ಪುಝಕ್ಕೆ ಶ್ರೀಲಂಕಾದಿಂದ ಉಗ್ರರು ತಲುಪಿದ್ದು, ಅಲ್ಲಿಂದ ಕರ್ನಾಟಕ ಅಥವಾ ಕೇರಳದ ಯಾವುದೇ ಕಡೆಗಳಿಂದ ಪಾಕಿಸ್ತಾನಕ್ಕೆ ತೆರಳುವ ಮಾಹಿತಿ ಇದೆ. ಈ ಹಿನ್ನೆಲೆ ಗುಪ್ತಚರ ಇಲಾಖೆ ಕೇರಳ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲೂ ಹೈ ಅಲರ್ಟ್ ನೀಡಲಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಬೋಟ್ ಕಂಡುಬಂದಲ್ಲಿ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.