ಕಾರ್ಕಳ, ಆ 31 (DaijiworldNews/PY): "ಮನುಷ್ಯನ ಪ್ರಮುಖ ಅಂಗಗಳಲ್ಲಿ ಕಣ್ಣು ಕೂಡಾ ಒಂದಾಗಿದೆ. ವಿಶ್ವದ ಪ್ರತಿಯೊಬ್ಬ ಮಾನವನು ಅಂಧತ್ವದಿಂದ ಮುಕ್ತನಾಗಿ ಬೆಳಕಿನೆಡೆಗೆ ಸಾಗಬೇಕು. ನಮ್ಮ ಕಣ್ಣು ಇತರರ ಬದುಕಿಗೆ ಬೆಳಕನ್ನು ನೀಡಬಹುದು. ಕಣ್ಣಿನ ಆರೋಗ್ಯ ಪ್ರಮುಖವಾಗಿರುತ್ತದೆ" ಎಂದು ಲಯನ್ಸ್ ಸಂಸ್ಥೆ ಡಿಸ್ಟ್ರಿಕ್ಟ್ 317 ಸಿ ಪ್ರಥಮ ಉಪ ಜಿಲ್ಲಾ ಗವರ್ನರ್ ಕೆ.ಸಿ ವೀರಭದ್ರ ಹೇಳಿದರು.
ಲಯನ್ಸ್ ಕ್ಲಬ್ ಕಾರ್ಕಳ ಇದರ ವತಿಯಿಂದ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ಅಂಧತ್ವ ವಿಭಾಗ), ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇನಲ್ ಟ್ರಸ್ಟ್, ಉಡುಪಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಭವನದಲ್ಲಿ ಆಯೋಜಿಸಿ ಉಚಿತ ನೇತ್ರ ತಪಾಸಣಾ ಚಿಕಿತ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ರಾಜೇಶ್ ಶೆಣೈ ಮಾತನಾಡಿ, "ಅಂಧತ್ವ ನಿವಾರಣೆಗಾಗಿ ಲಯನ್ಸ್ ಕಬ್ಲ್ ಕಾರ್ಕಳ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್ಥಿಕ ದುರ್ಬಲರಿಗೆ ಅಗತ್ಯ ಚಿಕಿತ್ಸೆಗಾಗಿ ನೆರವು ನೀಡುತ್ತಾ ಬಂದಿದೆ. ಆಧುನಿಕ ತತ್ವಜ್ಞಾನದ ಉಪಯೋಗಗಳು ಕಣ್ಣಿನ ದೃಷ್ಠಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ" ಎಂದರು.
ಲಯನ್ಸ್ ಸಂಸ್ಥೆ ದ್ವಿತೀಯ ಜಿಲ್ಲಾ ಗವರ್ನರ್ ನ್ಯಾರಿ ಕರ್ನಲಿಯೋ ಶುಭಾಂಶನೆಗೈದರು.
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯೆ ಪೂರ್ಣಶ್ರೀ ಅವರ ತಂಡ ಶಿಬಿರದಲ್ಲಿ ತಪಾಸಣೆ ನಡೆಸಿದರು.
ಲಯನ್ಸ್ ಕ್ಲಬ್ ಮಿಥುನ್ ಹೆಗ್ಡೆ, ಸುಭಾಸ್ ಸುವರ್ಣ, ಪ್ರಕಾಶ್ ಪಿಂಟೋ, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ರಾವ್, ಕ್ಯಾಥೋಲಿಕ್ ಅಧ್ಯಕ್ಷ ನೋವೆಲ್ ಡಿಸಿಲ್ವ ಉಪಸ್ಥಿತರಿದ್ದರು.
ಕಾರ್ಯದರ್ಶಿ ನಿತ್ಯಾನಂದ ಭಂಡಾರಿ ವಂದಿಸಿದರು.