ಉಡುಪಿ, ಆ.31 (DaijiworldNews/HR): ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂವನ್ನು ಹಿಂಪಡೆಯುವಂತೆ ಶಾಸಕ ರಘುಪತಿ ಭಟ್ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಜಿಲ್ಲೆಗೆ ವಾರಾಂತ್ಯ ಕರ್ಫ್ಯೂನ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
"ನಾವು ಪ್ರತಿದಿನ ಮೂರು ಸಾವಿರದಿಂದ ನಾಲ್ಕು ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಮತ್ತು ಇಲ್ಲಿ ಪಾಸಿಟಿವಿಟಿ ದರವು ಸುಮಾರು 1.5 ಪ್ರತಿಶತದಷ್ಟಿದೆ. ಇತರ ರಾಜ್ಯಗಳೊಂದಿಗೆ ತಮ್ಮ ಗಡಿಗಳನ್ನು ಹಂಚಿಕೊಳ್ಳುವ ಜಿಲ್ಲೆಗಳಿಗೆ ವಾರಾಂತ್ಯದ ಕರ್ಫ್ಯೂ ಮಾಡಿರುವುದನ್ನು ನಾನು ಒಪ್ಪುತ್ತೇನೆ ಆದರೆ ಉಡುಪಿ ಗಡಿ ಪ್ರದೇಶ ಜಿಲ್ಲೆಗೆ ವಾರಾಂತ್ಯ ಕರ್ಫ್ಯೂನ ಅಗತ್ಯವಿಲ್ಲ" ಎಂದಿದ್ದಾರೆ.
ಇನ್ನು "ವ್ಯವಹಾರವು ಈಗ ಸ್ಪಲ್ಪ ಮಟ್ಟಿಗೆ ಚೇತರಿಕೆಯ ಕಂಡುಕೊಳ್ಳುತ್ತಿದೆ ಎಂದಿರುವ ಅವರು, ಅವರು ಬುಧವಾರದಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ವಾರಾಂತ್ಯ ಕರ್ಫ್ಯೂಗೆ ವಿನಾಯಿತಿ ವಿಸ್ತರಿಸಲು ವಿನಂತಿಸುವುದಾಗಿ ಹೇಳಿದರು.
"ನಾನು ಸಚಿವ ಸುನೀಲ್ ಕುಮಾರ್ ಜೊತೆ ಮಾತನಾಡಿದ್ದೇನೆ. ನಮ್ಮ ಜಿಲ್ಲೆಗೆ ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ ಎಂದು ನಾವು ಇಬ್ಬರೂ ಅಭಿಪ್ರಾಯಪಟ್ಟಿದ್ದೇವೆ. ನಾವು ಒಟ್ಟಾಗಿ ಈ ವಿಷಯದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.