ಉಡುಪಿ, ಆ. 30 (DaijiworldNews/HR): ಸಂತೆಕಟ್ಟೆಯ ಪೆಟ್ರೊಲ್ ಬಂಕ್ ಬಳಿ ಹಾಡಹಗಲೇ ಯುವಕನೊಬ್ಬ ಯುವತಿಗೆ ಕುತ್ತಿಗೆ ಚೂರಿಯಿಂದ ಸೀಳಿ ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿಡು ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ.
ಮೃತ ಯುವತಿಯನ್ನು ಸೌಮ್ಯ ಶ್ರೀ ಭಂಡಾರಿ(28) ಮತ್ತು ಯುವಕನನ್ನು ಸಂದೇಶ್ ಕುಲಾಲ್(28) ಎಂದು ಗುರುತಿಸಲಾಗಿದೆ.
ಯುವತಿಯು ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದ ಯುವಕನು ಆಕೆಯ ಕುತ್ತಿಗೆ ಸೀಳಿದ್ದು, ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿದ್ದು ಇಬ್ಬರೂ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ಚಿಕಿತ್ಸೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾಳೆ.
ಇನ್ನು ಈ ಇಬ್ಬರೂ ಸ್ಥಳೀಯರೇ ಎಂದು ಹೇಳಲಾಗಿದೆ.