ಕಾರ್ಕಳ, ಆ 30 (DaijiworldNews/MS): ತ್ಯಾಜ್ಯ ನಿರ್ವಹಣೆಯೇ ಇಂದು ಬಹು ದೊಡ್ಡ ಸವಾಲಾಗಿದ್ದು, ಗ್ರಾ.ಪಂ ಮಟ್ಟದಲ್ಲಿ ತ್ಯಾಜ್ಯ ಸಮಸ್ಯೆ ಪರಿಹಾರವಾಗಿ ನಿಟ್ಟೆ ಗ್ರಾಮದಲ್ಲಿ ಸಿದ್ಧಗೊಂಡಿರುವ ಗ್ರಾಮೀಣ ಎಂಆರ್ಎಲ್ ಘಟಕ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ ಎಂದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ಕುಮಾರ್ ಹೇಳಿದರು.
ಕಾರ್ಕಳ ತಾ.ಪಂನ ಸಾಮರ್ಥ್ಯ ಸೌಧದಲ್ಲಿ ನಡೆದ ಗ್ರಾಮೀಣಾಭಿವ್ರದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿ ಪಂಚಾಯತ್ ಉಡುಪಿ, ತಾ.ಪಂ ಕಾರ್ಕಳ ಎಂಆರ್ಎಲ್ ಘಟಕದ ಕಾರ್ಯನಿರ್ವಾಹಣೆಯ ಉಡುಪಿ, ಕಾರ್ಕಳ, ಹೆಬ್ರಿ, ಕಾಪು ತಾಲೂಕುಗಳ ೪೧ ಗ್ರಾ.ಪಂ ಪಿಡಿಒ, ಅಧ್ಯಕ್ಷರುಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತ್ಯಾಜ್ಯ ಸಮಸ್ಯೆ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಗಳಿಗೆ ಮಾತ್ರ ಸೀಮಿತವಾಗಿತ್ತು. ಅದು ಇದೀಗ ಗ್ರಾ.ಪಂ ಗಳಿಗೂ ವಿಸ್ತರಿಸಿದೆ. ಗ್ರಾ.ಪಂ ಭೇಟಿ ಸಂದರ್ಭ ಅನುಭವಕ್ಕೆ ಬಂದಿದೆ. ಗ್ರಾ.ಪಂ ಗಳ ತ್ಯಾಜ್ಯ ಸಮಸ್ಯೆಗೆ ಎಆರ್ಎಲ್ ಘಟಕ ಒಂದು ಪರಿಹಾರವಾಗುದ್ದು, ಎಲ್ಲರ ಸಹಕಾರದಿಂದ ಇದು ಯಶಸ್ವಿಯಾಗುವುದು ಎಂದರು.
ಜಿ.ಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಘಟಕದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಕಳ ತಾ.ಪಂ ಇಒ ಗುರುದತ್ತ್ ಎಂ.ಎನ್ , ಹೆಬ್ರಿ ತಾ.ಪಂ ಇಒ ಶಶಿಧರ್ ಕೆ.ಜಿ, ಕಾಪು ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿವೇಕ್ ನಂದ ಗಾಂವ್ ಕರ್, ಉಡುಪಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ರಾಜ, ರಾಮಕ್ರಷ್ಣ ಮಿಷನ್ನವರು ಉಪಸ್ಥಿತರಿದ್ದರು. ನಾಲ್ಕು ತಾಲೂಕುಗಳ ಗ್ರಾ.ಪಂ ಪಿಡಿಒ, ಅಧ್ಯಕ್ಷರುಗಳು ಭಾಗವಹಿಸಿದ್ದರು.