ಮಂಗಳೂರು ಆ 30 (DaijiworldNews/MS): ಉರ್ವದಲ್ಲಿರುವ ಅಪಾರ್ಟ್ಮೆಂಟ್ನಿಂದ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಹಾವೇರಿ ಮೂಲದ ಹನುಮಂತ (30), ಶಿವಮೊಗ್ಗದ ಮಂಜುರಾಜ್( 29), ಹಾಗೂ ಕುತ್ತಾರುವಿನ ಶಂಕರ್ ಶೆಟ್ಟಿ (66 ) ಎಂದು ಗುರುತಿಸಲಾಗಿದೆ.
ಆರೋಪಿಗಳು ಆಗಸ್ಟ್ 28 ರಂದು ಆರೋಪಿಗಳು ಅಪಾರ್ಟ್ಮೆಂಟ್ನಿಂದ ಸೈಕಲ್ ಕಳವು ಮಾಡಿದ್ದರು. ಕದ್ದ ಸೈಕಲ್ ಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ನ ಪುತ್ರನ ಸೈಕಲ್ ಕೂಡಾ ಸೇರಿತ್ತು.
ಬಂಧಿತರಿಂದ ಸುಮಾರು 1.5 ಲಕ್ಷ ಮೌಲ್ಯದ 9 ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯಪಾನ ಹಾಗೂ ಜೂಜಾಡಲು ಹಣದ ಅವಶ್ಯಕತೆಗಾಗಿ ಕದ್ದ ಸೈಕಲ್ಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದರು ಎಂದು ಹೇಳಲಾಗಿದೆ.