ಕಾರ್ಕಳ, ಆ. 30 (DaijiworldNews/HR): ಕೇಂದ್ರ ಸರಕಾರದ ಇ-ಶ್ರಮ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ದೊರಕುವಂತಾಗಲಿ. ಆ ಮೂಲಕ ಯೋಜನೆ ಯಶಸ್ಸುಗೊಳಲಿ ಎಂದು ಬಾಲಾಜಿ ಶಿಬಿರದ ಗುರು ಬಾಲಕೃಷ್ಣ ಹೆಗ್ಡೆ ಹೇಳಿದರು.
ರಾಮಪ್ಪ ಶಾಲೆಯಲ್ಲಿ ಯೂಥ್ ಫಾರ್ ಸೇವಾ ಉಡುಪಿ ಇವರ ಆಶ್ರಯದಲ್ಲಿ ಯುವವಾಹಿನಿ(ರಿ) ಕಾರ್ಕಳ ಘಟಕ ಇವರ ಸಹಕಾರ ಮತ್ತು ಸೇವಾ ಸಿಂಧು ಸಂಯೋಜನೆಯಲ್ಲಿ ಕಾರ್ಕಳದ ಅರ್ಹ ಫಲನುಭವಿಗಳಿಗೆ ಕೇಂದ್ರ ಸರಕಾರದ ಇ-ಶ್ರಮ ಯೋಜನೆ ಅಸಂಘಟಿತ ಕಾರ್ಮಿಕ ಕಾರ್ಡ್ ಉಚಿತ ನೋಂದಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಕಳ ಪುರಸಭಾ ಸದಸ್ಯೆ ಮೀನಾಕ್ಷಿ, ಸೇವಾ ಸಿಂಧೂನ ಅನಿಲ್ ಕಾಮತ್, ಕಾರ್ಕಳ ಕಾರ್ಮಿಕ ಇಲಾಖೆಯ ಮೋಹನ್ ಶೆಣೈ ಉಪಸ್ಥಿತರಿದ್ದರು.
ಇ-ಶ್ರಮ ಯೋಜನೆಯ ರೂಪುರೇಷೆಗಳನ್ನು ಗಣೇಶ ದಿಶಾನಿ ವಿವರಿಸಿ, ಯೂಥ್ ಫಾರ್ ಸೇವಾ ತಂಡದ ರಮಿತಾ ಶೈಲೆಂದ್ರ ರಾವ್ ನಿರೂಪಿಸಿದರು. ಯುವ ವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್ ಧನ್ಯವಾದವಿತ್ತರು.