ಪುತ್ತೂರು, ಆ 29 (DaijiworldNews/PY): 12 ವರ್ಷದ ಬಾಲಕನ ಅಪಹರಿಸಲು ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತರು ವಿಫಲ ಯತ್ನ ನಡೆಸಿದ ಘಟನೆ ಉಪ್ಪಿನಂಗಡಿಯ ಲಕ್ಷ್ಮೀ ನಗರ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಲಕ್ಷ್ಮೀ ನಗರ ನಿವಾಸಿ ಅಬ್ದುಲ್ಲಾ ಎನ್ನುವವರ ಪುತ್ರ 12ರ ಹರೆಯದ ಬಾಲಕ ಆನ್ ಲೈನ್ ಪರೀಕ್ಷಾ ಪೇಪರ್ಗಳನ್ನು ಮದರಸಕ್ಕೆ ನೀಡಿ ಹಿಂದಿರುಗುತ್ತಿದ್ದ. ಈ ಸಂದರ್ಭ ರಸ್ತೆ ಬದಿ ನಿಲ್ಲಿಸಲಾಗಿದ್ದ ಮಾರುತು ಓಮ್ನಿ ಕಾರಿನ ಬಾಗಿಲು ತೆಗೆದು ವ್ಯಕ್ತಿಯೋರ್ವ ಬಾಲಕನ ಕೈ ಹಿಡಿದು ಎಳೆದಿದ್ದು, ಈ ವೇಳೆ ಬಾಲಕ ಆತನ ಕೈಗೆ ಕಚ್ಚಿ ತಪ್ಪಿಸಿಕೊಂಡು ಮನೆಗೆ ಬಂದಿದ್ದೇನೆ ಎಂದು ಬಾಲಕ ಮನೆ ಮಂದಿಗೆ ಹೇಳಿದ್ದಾನೆ.
ಈ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ನಾಗರಿಕರು ತಕ್ಷಣವೇ ಪತ್ತೆ ಕಾರ್ಯಾಚರಣೆ ನಡೆಸಿದ್ದಾದರೂ ಅಪಹರಣಕ್ಕೆ ಯತ್ನಿಸಿದ ಕಾರು ಪತ್ತೆಯಾಗಿಲ್ಲ. ನಂತರ ಸಮೀಪದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಸಂದರ್ಭ ಬಾಲಕ ಹೇಳಿದ ಸ್ಥಳದಲ್ಲಿ ಹಾಗೂ ಅದೇ ಸಮಯದಲ್ಲಿ ಮಾರುತಿ ಓಮ್ನಿ ಕಾರೊಂದು ರಸ್ತೆ ಬದಿ ನಿಂತಿರುವುದು ಪತ್ತೆಯಾಗಿದೆ.